Select Your Language

Notifications

webdunia
webdunia
webdunia
webdunia

ಕಾರ್ಗಿಲ್ ವಿಜಯ್ ದಿವಸ್ ಗೆ ಸೈನಿಕರನ್ನು ಸ್ಮರಿಸದ ರಾಹುಲ್ ಗಾಂಧಿ ವಿರುದ್ಧ ಟೀಕೆ

ಕಾರ್ಗಿಲ್ ವಿಜಯ್ ದಿವಸ್ ಗೆ ಸೈನಿಕರನ್ನು ಸ್ಮರಿಸದ ರಾಹುಲ್ ಗಾಂಧಿ ವಿರುದ್ಧ ಟೀಕೆ
ನವದೆಹಲಿ , ಭಾನುವಾರ, 29 ಜುಲೈ 2018 (08:49 IST)
ನವದೆಹಲಿ: ಮೊನ್ನೆಯಷ್ಟೇ ಕಾರ್ಗಿಲ್ ನಲ್ಲಿ ನಮ್ಮ ಸೈನಿಕರನ್ನು ಪಾಕ್ ಪಡೆಯನ್ನು ಹೊಡೆದುರುಳಿಸಿ ವಿಜಯೋತ್ಸವ ಆಚರಿಸಿದ ವಾರ್ಷಿಕೋತ್ಸವವಿತ್ತು. ಆದರೆ ಈ ಬಗ್ಗೆ ಟ್ವೀಟ್ ಮಾಡದ ರಾಹುಲ್ ಗಾಂಧಿ ವಿರುದ್ಧ ಇದೀಗ ಟೀಕೆ ಮಾಡಲಾಗುತ್ತಿದೆ.

ಈ ಬಗ್ಗೆ ಟೀಕೆ ಮಾಡಿರುವ ಬಿಜೆಪಿ ಶಾಸಕ ಸಿಟಿ ರವಿ ‘ರಾಹುಲ್ ಗಾಂಧಿಗೆ ಪಾಕಿಸ್ತಾನದ ಬಗ್ಗೆ ಎಷ್ಟು ಪ್ರೀತಿಯಿದೆ, ಭಾರತದ ಸೈನಿಕರಿಗೆ ಬಗ್ಗೆ ಎಷ್ಟು ಧ್ವೇಷವಿದೆ ಎಂಬುದು ಇದರಿಂದಲೇ ಗೊತ್ತಾಗುತ್ತದೆ. ನಮ್ಮ ಸೈನಿಕರು ಬಲಿದಾನ ಮಾಡಿ ಕಾರ್ಗಿಲ್ ನಲ್ಲಿ ವಿಜಯೋತ್ಸವ ಆಚರಿಸಿದ ಈ ದಿನದ ಬಗ್ಗೆ ಒಂದೇ ಒಂದು ಟ್ವೀಟ್ ಮಾಡಿಲ್ಲ’ ಎಂದು ಟ್ವೀಟ್ ಮುಖಾಂತರ ಟೀಕಿಸಿದ್ದಾರೆ.

ಅಷ್ಟೇ ಅಲ್ಲದೆ, ಪ್ರಧಾನ ಮಂತ್ರಿ ಹುದ್ದೆ ಮರೆತುಬಿಡಿ, ಈ ವ್ಯಕ್ತಿ ಸಂಸದರೆನಿಸಲೂ ಯೋಗ್ಯರೇ ಎಂದು ಸಿಟಿ ರವಿ ಲೇವಡಿ ಮಾಡಿದ್ದಾರೆ. ಸಿಟಿ ರವಿ ಮಾತ್ರವಲ್ಲ, ಬಿಜೆಪಿ ಸಾಮಾಜಿಕ ಜಾಲತಾಣಗಳ ಮೂಲಕ ರಾಹುಲ್ ಗಾಂಧಿಯ ಈ ನಡೆಯ ಕುರಿತು ಟೀಕೆ ಮಾಡುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಲೋಕಸಭೆ ಚುನಾವಣೆ: ಕ್ಷೇತ್ರ ಬದಲಾವಣೆ ಮಾಡ್ತಾರಾ ಡಿವಿ ಸದಾನಂದ ಗೌಡ?