Webdunia - Bharat's app for daily news and videos

Install App

ಸರ್ಕಾರಿ ಉದ್ಯೋಗಿಗಳಿಗೆ ಕೇಂದ್ರದ ಮಹತ್ವದ ಸೂಚನೆ!

Webdunia
ಶನಿವಾರ, 25 ಜೂನ್ 2022 (11:56 IST)
ನವದೆಹಲಿ : ಹಣಕಾಸು ಸಚಿವಾಲಯವು ಮಿತವ್ಯಯ ಮಂತ್ರ ಪಠಿಸಿದೆ.

ಸರ್ಕಾರಿ ಉದ್ಯೋಗಿಗಳು ಸರ್ಕಾರದ ವೆಚ್ಚದಲ್ಲಿ ಪ್ರಯಾಣ ನಡೆಸುವಾಗ ಲಭ್ಯವಿರುವ ಅತಿ ಅಗ್ಗದ ಬೆಲೆಯಲ್ಲಿ ವಿಮಾನದ ಟಿಕೆಟ್ಗಳನ್ನು ಖರೀದಿಸಬೇಕು ಹಾಗೂ ಪ್ರವಾಸದ 21 ದಿನಗಳ ಮುಂಚಿತವಾಗಿ ಟಿಕೆಟ್ ಬುಕ್ ಮಾಡಬೇಕು’ ಎಂದು ಆದೇಶ ಹೊರಡಿಸಿದೆ.

ಈ ಮೂಲಕ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಲು ಮುಂದಾಗಿದೆ. ‘ಸರ್ಕಾರಿ ವೆಚ್ಚದಲ್ಲಿ ಪ್ರಯಾಣ ಮಾಡುವಾಗ ಉದ್ಯೋಗಿಗಳು, ಬಾಲ್ಮರ್ ಲೌರಿ ಮತ್ತು ಕೊ, ಅಶೋಕ ಟ್ರಾವೆಲ್ಸ್ ಆ್ಯಂಡ್ ಟೂರ್ಸ್ ಹಾಗೂ ಐಆರ್ಸಿಟಿಸಿ ಈ ಮೂರು ಅಧಿಕೃತ ಟ್ರಾವೆಲ್ ಏಜೆಂಟ್ಗಳ ಬಳಿಯಿಂದ ಮಾತ್ರ ವಿಮಾನ ನಿಲ್ದಾಣದ ಟಿಕೆಟ್ಗಳನ್ನು ಖರೀದಿಸಬಹುದಾಗಿದೆ.

ಉದ್ಯೋಗಿಗಳು ತಮ್ಮ ನಿಗದಿತ ಪ್ರಯಾಣ ವರ್ಗದಲ್ಲಿ ಲಭ್ಯವಿರುವ ಅತಿ ಅಗ್ಗದ ಬೆಲೆಯ ವಿಮಾನಗಳ ಟಿಕೆಟ್ ಖರೀದಿಸಬೇಕು’ ಎಂದು ಸಚಿವಾಲಯ ಸೂಚಿಸಿದೆ.

‘ಉದ್ಯೋಗಿಗಳು ಪ್ರವಾಸದ ಕಾರ್ಯಕ್ರಮವು ಅನುಮೋದನೆ ಪ್ರಕ್ರಿಯೆಯಲ್ಲಿದ್ದರೂ ಉದ್ದೇಶಿತ ಪ್ರಯಾಣಕ್ಕಾಗಿ ಬುಕಿಂಗ್ ಮಾಡಬಹುದು. ಆದರೆ ಅನಗತ್ಯವಾಗಿ ಟಿಕೆಟ್ ರದ್ದು ಮಾಡಬಾರದು’ ಎಂದು ಸಚಿವಾಲಯ ಸೂಚಿಸಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments