Webdunia - Bharat's app for daily news and videos

Install App

ಹೆಣ್ಣುಮಗು ಜನಿಸಿದ್ದಕ್ಕೆ ಉಚಿತವಾಗಿ 40,000 ರೂ. ಪಾನಿಪುರಿ ವಿತರಣೆ

Webdunia
ಮಂಗಳವಾರ, 14 ಸೆಪ್ಟಂಬರ್ 2021 (08:28 IST)
ಭೋಪಾಲ್, ಸೆ 14 : ಹೆಣ್ಣು ಮಗು ಹುಟ್ಟಿದನ್ನು ಬೀದಿ ಬದಿ ವ್ಯಾಪಾರಿಯೊಬ್ಬರು ವಿಭಿನ್ನ ಮತ್ತು ವಿಶೇಷವಾಗಿ ಆಚರಿಸಿಕೊಂಡಿರುವ ಘಟನೆ ಭೋಪಾಲ್ ನಗರದಲ್ಲಿ ನಡೆದಿದೆ. ಹೆಣ್ಣು ಮಗು ಯಾಕಾದರೂ ಜನಿಸಿದೆಯೋ ಏನೋ ಎಂದು ಕೊರಗುವ ಜನರ ಮಧ್ಯೆ ಸಮಾಜಕ್ಕೆ ಆದರ್ಶವಾಗಿದ್ದಾರೆ.

ಭಾನುವಾರ ಅಂಜಲ್ ಗುಪ್ತಾ ಎಂಬ ಬೀದಿ ವ್ಯಾಪಾರಿಯು ತನಗೆ ಹೆಣ್ಣು ಮಗು ಜನಿಸಿದೆ ಎಂಬ ಸಂಭ್ರಮಕ್ಕೆ 35 ರಿಂದ 40 ಸಾವಿರ ರೂಪಾಯಿ ಮೌಲ್ಯದ ಪಾನಿಪುರಿಯನ್ನು ಉಚಿತವಾಗಿ ವಿತರಿಸಿದ್ದಾನೆ.
ಮಧ್ಯಪ್ರದೇಶದ ಕೋಲಾರ ನಗರದಲ್ಲಿ ಪಾನಿಪುರಿ ಅಂಗಡಿಯನ್ನು ಇಟ್ಟುಕೊಂಡಿದ್ದಾರೆ. "ಹೆಣ್ಣು ಮಗುವಿನ ಜನನ ನನಗೆ ಕನಸಿನ ಮಾತು. ನಾನು ಮದುವೆಯಾದಾಗಿನಿಂದ, ನಾನು ಯಾವಾಗಲೂ ಮಗಳನ್ನು ಬಯಸುತ್ತಿದ್ದೆ, ಆದರೆ ಎರಡು ವರ್ಷಗಳ ಹಿಂದೆ ನನಗೆ ಮೊದಲು ಮಗನ ಆಶೀರ್ವಾದವಾಯಿತು, "ಎಂದು 30 ವರ್ಷದ ಮಾರಾಟಗಾರ ಸೋಮವಾರ ಪಿಟಿಐಗೆ ತಿಳಿಸಿದ್ದಾರೆ. ಈ ವರ್ಷ ಆಗಸ್ಟ್ 17 ರಂದು ದೇವರು ತನಗೆ ಮಗಳನ್ನು ಕರುಣಿಸಿದನೆಂದು ಅಂಜಲ್ ಗುಪ್ತಾ ಹೇಳಿದನು.
ಎಂಟನೇ ತರಗತಿಗೆ ಅಂಜಲ್ ಗುಪ್ತಾ ಡ್ರಾಪ್ಔಟ್ ಆಗಿದ್ದನು. "ನಿನ್ನೆ ನನ್ನ ಮಗನ ಎರಡನೇ ಹುಟ್ಟುಹಬ್ಬ ಮತ್ತು ನಾನು ನನ್ನ ಮಗಳ ಜನನವನ್ನು ಭೋಪಾಲ್ ಜನರಿಗೆ ಉಚಿತ ಪಾನಿ-ಪುರಿ ನೀಡುವ ಮೂಲಕ ಘೋಷಿಸಲು ಮತ್ತು ಅವರಿಗೆ "ಬೇಟಿ ಹೈ, ಕಾಲ್ ಹೈ" ಎಂಬ ಸಂದೇಶವನ್ನು ನೀಡಲು ನಿರ್ಧರಿಸಿದೆ ಎಂದಿದ್ದಾರೆ.
40 ಸಾವಿರ ರೂಪಾಯಿ ಪಾನಿಪುರಿ ಉಚಿತ:
"ಭಾನುವಾರ ಸಂಜೆ 35,000 ದಿಂದ 40,000 ರೂಪಾಯಿ ಮೌಲ್ಯದಷ್ಟು ಪಾನಿಪುರಿಯನ್ನು ಸಾರ್ವಜನಿಕರಿಗೆ ಉಚಿತವಾಗಿ ನೀಡಿದ್ದೇನೆ. ಆದರೆ ಮಗಳು ಅದು ಮಗಳು ಜನಿಸಿದ ಸಂಭ್ರಮಕ್ಕಿಂತ ಹೆಚ್ಚು ಸಂತೋಷವನ್ನು ಕೊಡಲಿಲ್ಲ. ಕೋಲಾರ ಪ್ರದೇಶದಲ್ಲಿ ಮಧ್ಯಾಹ್ನದಿಂದ ಸಂಜೆವರೆಗೂ ನೂರಾರು ಸಂಖ್ಯೆಯಲ್ಲಿ ನೆರೆದ ಜನರು ಉಚಿತವಾಗಿ ನೀಡಿದ ಪಾನಿಪುರಿಯನ್ನು ಸೇವಿಸಿ ಮಗಳು ಜನಿಸಿದ ತಂದೆಗೆ ಶುಭ ಹಾರೈಸಿದರು. ಕೆಲವು ಪ್ರತ್ಯಕ್ಷದರ್ಶಿಗಳು ಜನರು ಕೋವಿಡ್ -19 ಪ್ರೋಟೋಕಾಲ್ಗಳನ್ನು ಸಹ ಅನುಸರಿಸಲಿಲ್ಲ, ಉಚಿತ ತಿಂಡಿಯನ್ನು ಆನಂದಿಸುವಾಗ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಿಲ್ಲ.
ಕಳೆದ 20 ವರ್ಷಗಳಿಂದ ಪಾನಿಪುರಿ ವ್ಯಾಪಾರ ಮಾಡುತ್ತಿರುವ ಅಂಜಲ್ ಗುಪ್ತಾ ಅವರಿಗೆ ಇಬ್ಬರು ಸಹೋದರರಿದ್ದು, ಇಂಜಿನಿಯರ್ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಪತ್ನಿಯು ಪದವೀಧರರಾಗಿದ್ದು, ಆಕೆಗೆ ಪ್ರತ್ಯೇಕವಾಗಿ ಹೊಲಿಗೆ ಯಂತ್ರದ ಕೇಂದ್ರವನ್ನು ಹಾಕಿಕೊಡುವ ಯೋಜನೆಯನ್ನು ಇಟ್ಟುಕೊಂಡಿದ್ದರು. ಆದರೆ ಇದೀಗ ಪತ್ನಿಯು ಹೆಣ್ಣು ಮಗುವಿಗೆ ಜನ್ಮ ನೀಡಿರುವುದರಿಂದ ತಮ್ಮ ಯೋಜನೆಯನ್ನು ಕೆಲಕಾಲ ಮುಂದೂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments