Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ನಿಂದ ಹೊರಬಿದ್ದ ಶಂಕರ್ ಅಶ್ವತ್ಥ್

ಬಿಗ್ ಬಾಸ್ ನಿಂದ ಹೊರಬಿದ್ದ ಶಂಕರ್ ಅಶ್ವತ್ಥ್
ಬೆಂಗಳೂರು , ಸೋಮವಾರ, 5 ಏಪ್ರಿಲ್ 2021 (09:20 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಿಂದ ಕೊನೆಗೂ ಮೊದಲ ಬಾರಿಗೆ ಪುರುಷ ಸ್ಪರ್ಧಿಯೊಬ್ಬರು ಎಲಿಮಿನೇಟ್ ಆಗಿದ್ದಾರೆ.


ಹಿರಿಯ ನಟ ಶಂಕರ್ ಅಶ್ವತ್ಥ್  ಈ ವಾರ ಮನೆಯಿಂದ ಹೊರಬಂದ ಸ್ಪರ್ಧಿ. ಟಾಸ್ಕ್ ವಿಚಾರದಲ್ಲಿ ಹೆಚ್ಚು ಭಾಗಿಯಾಗದ ಕಾರಣಕ್ಕೆ ಶಂಕರ್ ಅಶ್ವತ್ಥ್ ಮೇಲೆ ಸಹಸ್ಪರ್ಧಿಗಳ ಅಸಮಾಧಾನವಿತ್ತು. ಅಲ್ಲದೆ, ಅವರಿಂದ ಹೆಚ್ಚು ಮನರಂಜನೆಯೂ ಸಿಗುತ್ತಿಲ್ಲ ಎಂದು ವೀಕ್ಷಕರೂ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು.

ಇದೆಲ್ಲದರ ನಡುವೆ ಈ ವಾರ ಅವರು ಮನೆಯಿಂದ ಹೊರಬಿದ್ದಿದ್ದಾರೆ. ಉಳಿದಂತೆ ಈ ವಾರ ಟಾಸ್ಕ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವೈಷ್ಣವಿ ಗೌಡಗೆ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಸಿಕ್ಕಿದೆ. ಈ ವಾರ ಬರಹಗಾರ ಚಂದ್ರಚೂಡ ಮನೆಯೊಳಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿರುವುದು ವಿಶೇಷ.

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ಷಯ್ ಕುಮಾರ್ ರನ್ನೂ ಬಿಡದ ಕೊರೋನಾ ಸೋಂಕು