Publish Date: Fri, 02 Apr 2021 (09:45 IST)
Updated Date: Fri, 02 Apr 2021 (09:46 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಐದನೇ ವಾರದ ಅಂತ್ಯಕ್ಕೆ ವೈಲ್ಡ್ ಕಾರ್ಡ್ ಮೂಲಕ ಹೊಸ ಸ್ಪರ್ಧಿಯ ಎಂಟ್ರಿಯಾಗಿದೆ. ಅವರೇ ಪತ್ರಕರ್ತ, ಬರಹಗಾರ ಚಕ್ರವರ್ತಿ ಚಂದ್ರಚೂಡ.
ಈ ಹೆಸರು ಸಿನಿಮಾ ಪ್ರಿಯರಿಗೆ ಚಿರಪರಿಚಿತ. ಯಾಕೆಂದರೆ ಹಿಂದೊಮ್ಮೆ ನಟಿ ಶ್ರುತಿ ಜೊತೆಗೆ ಎರಡನೇ ಮದುವೆ ಮಾಡಿಕೊಂಡು ಭಾರೀ ವಿವಾದ ಸೃಷ್ಟಿಸಿದ್ದವರು. ವಿಶೇಷವೆಂದರೆ ಇವರು ಇನ್ನೊಬ್ಬ ಸ್ಪರ್ಧಿ ಪ್ರಶಾಂತ್ ಸಂಬರಗಿ ಅವರ ಸ್ನೇಹಿತರಂತೆ.
ಹೀಗಾಗಿ ಚಂದ್ರಚೂಡ ಆಗಮನ ಪ್ರಶಾಂತ್ ಮುಖದಲ್ಲಿ ನಗು ತರಿಸಿದೆ. ಆದರೆ ಮೊದಲ ದಿನವೇ ತಮ್ಮ ಬಗ್ಗೆ ಉದ್ದುದ್ದು ಬಿಲ್ಡಪ್ ಕೊಟ್ಟಿದ್ದು ಯಾಕೋ ಅತಿಯಾಯಿತು ಎಂದು ವೀಕ್ಷಕರು ಸಾಮಾಜಿಕ ಜಾಲತಾಣದ ಮೂಲಕ ಕಾಮೆಂಟ್ ಮಾಡಿದ್ದಾರೆ. ಏನೇ ಆಗಲೀ ಸಪ್ಪೆಯಾಗಿರುವ ಮನೆಗೆ ಇನ್ನಷ್ಟು ಮಸಾಲಾ ತುಂಬಲು ಹೊಸ ಸ್ಪರ್ಧಿಯ ಆಗಮನವಾಗಿದೆ.