Select Your Language

Notifications

webdunia
webdunia
webdunia
webdunia

ಪುಟ್ಟಗೌರಿ ಮದುವೆಗೆ ಅಭಿಮಾನಿಗಳು ತಮಾಷೆ ಮಾಡಿದರೂ ಡೋಂಟ್ ಕೇರ್ ಎಂದ ನಿರ್ದೇಶಕ

ಪುಟ್ಟಗೌರಿ ಮದುವೆಗೆ ಅಭಿಮಾನಿಗಳು ತಮಾಷೆ ಮಾಡಿದರೂ ಡೋಂಟ್ ಕೇರ್ ಎಂದ ನಿರ್ದೇಶಕ
ಬೆಂಗಳೂರು , ಗುರುವಾರ, 19 ಅಕ್ಟೋಬರ್ 2017 (10:18 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪುಟ್ಟಗೌರಿ ಮದುವೆ ಧಾರವಾಹಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾಗುತ್ತಿದ್ದರೂ ನಿರ್ದೇಶಕ ರಾಮ್ ಜೀ ಮಾತ್ರ ತಣ್ಣಗಿದ್ದಾರೆ.

 
ಪುಟ್ಟಗೌರಿಯ ಅತಿರೇಕವೆನಿಸುವ ಸಾಹಸದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಮಾಷೆ ಮಾಡಲಾಗುತ್ತಿದೆ. ನಾಯಕಿ ಗೌರಿ ಹುಲಿಯೊಂದಿಗೆ ಸೆಣಸುವುದು, ಅಷ್ಟು ಎತ್ತರದಿಂದ ಬಿದ್ದರೂ ಸ್ವಲ್ಪವೂ ಗಾಯವಾಗದೇ ಇರುವುದು, ಬಿದ್ದ ಮೇಲೂ ಚಪ್ಪಲಿ, ಹೂವು ಕೊಂಚವೂ ಕೊಂಕದೇ ಇರುವುದು, ಹಾವಿನೊಂದಿಗೆ ಸೆಣಸುವುದು ಇತ್ಯಾದಿ ಬಗ್ಗೆ  ಅಭಿಮಾನಿಗಳು ಕಾಲೆಳೆಯುತ್ತಿದ್ದಾರೆ.

ಹಾಗಿದ್ದರೂ ಅದಕ್ಕೆಲ್ಲಾ ನಿರ್ದೇಶಕರು ತಲೆಯೇ ಕೆಡಿಸಿಕೊಂಡಿಲ್ಲವಂತೆ. ಈ ರೀತಿ ಅಭಿಮಾನಿಗಳು ಕಾಲೆಳೆಯುತ್ತಿರುವುದು ನಾಲ್ಕನೇ ಬಾರಿ. ಅದನ್ನು ನಾವು ಎಂಜಾಯ್ ಮಾಡುತ್ತಿದ್ದೇವೆ. ನಾಯಕಿ ಪಾತ್ರಧಾರಿಯನ್ನು ಬರಿಗಾಲಲ್ಲಿ ಕಾಡಿನಲ್ಲಿ ಓಡಿಸುವ ಯೋಜನೆ ಹೊಂದಿದ್ದೆವು. ಆದರೆ ಆಕೆ ಕಾಲಿಗೆ ಏಟು ಮಾಡಿಕೊಂಡಳು. ಹಾಗಾಗಿ ಚಪ್ಪಲಿ ಕೊಟ್ಟೆವು. ಇನ್ನು ಆಕೆಯ ಆತ್ಮ ಪರಿಶುದ್ಧವಾಗಿದೆ. ಹಾಗಾಗಿ ಹುಲಿಯೂ ಹೆದರಿ ಓಡಿತು ಎಂದು ತೋರಿಸಿದ್ದೇವಷ್ಟೇ ಎಂದು ಮಾಧ್ಯಮವೊಂದರ ಸಂದರ್ಶನದಲ್ಲಿ ರಾಮ್ ಜಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಿಚ್ಚ ಸುದೀಪ್ ದಂಪತಿಗೆ ಬಾಲಿವುಡ್ ನಿಂದಲೂ ಶುಭಾಷಯ! ಕಾರಣ ಗೊತ್ತಾ?