Select Your Language

Notifications

webdunia
webdunia
webdunia
webdunia

ಜೊತೆ ಜೊತೆಯಲಿ ಧಾರವಾಹಿ ನಿರ್ದೇಶಕರಿಗೆ ಆತ್ಮಹತ್ಯೆಯ ಎಚ್ಚರಿಕೆ ನೀಡಿದ ಅಭಿಮಾನಿ!

ಜೊತೆ ಜೊತೆಯಲಿ ಧಾರವಾಹಿ ನಿರ್ದೇಶಕರಿಗೆ ಆತ್ಮಹತ್ಯೆಯ ಎಚ್ಚರಿಕೆ ನೀಡಿದ ಅಭಿಮಾನಿ!
ಬೆಂಗಳೂರು , ಮಂಗಳವಾರ, 10 ಮಾರ್ಚ್ 2020 (09:28 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಜೊತೆ ಜೊತೆಯಲಿ’ ಧಾರವಾಹಿ ಹೊಸ ಸೆನ್ಷೇಷನ್ ಹುಟ್ಟಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಅಭಿಮಾನಿಯೊಬ್ಬ ನಿರ್ದೇಶಕರಿಗೆ ಫೇಸ್ ಬುಕ್ ನಲ್ಲೇ ಆತ್ಮಹತ್ಯೆ ಬೆದರಿಕೆ ಹಾಕಿದ್ದಾನೆ!


ಜೊತೆ ಜೊತೆಯಲಿ ಧಾರವಾಹಿ ಶೂಟಿಂಗ್ ಸ್ಥಳಕ್ಕೆ ನೂರಾರು ಜನ ಬರುತ್ತಿರುತ್ತಾರೆ. ಕಲಾವಿದರನ್ನು ಭೇಟಿಯಾಗಿ ಮಾತನಾಡಿಸುವುದು ಹೊಸದೇನಲ್ಲ. ಆದರೆ ನಿರ್ದೇಶಕ ಆರೂರು ಜಗದೀಶ್ ಫೇಸ್ ಬುಕ್ ನಲ್ಲಿ ಪ್ರಕಟಿಸಿರುವ ವಿಡಿಯೋ ಒಂದಕ್ಕೆ ಪ್ರತಿಕ್ರಿಯಿಸಿರುವ ಅಭಿಮಾನಿ ನಿಮ್ಮ ತಂಡವನ್ನು ನನ್ನ ಜನ್ಮದಿನದಂದು ಭೇಟಿ ಮಾಡಲು ಅವಕಾಶ ಕೊಡದಿದ್ದರೆ ಅಂದೇ ನನ್ನ ಕೊನೆಯ ದಿನವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾನೆ.

ಈ ವ್ಯಕ್ತಿಯ ಹುಚ್ಚು ಅಭಿಮಾನಕ್ಕೆ ಬೆಚ್ಚಿದ ನಿರ್ದೇಶಕ ಆರೂರು ಜಗದೀಶ್, ಹಾಗೆಲ್ಲಾ ಮಾಡಬೇಡಿ, ಖಂಡಿತಾ ಬನ್ನಿ ಭೇಟಿ ಮಾಡಿ ಎಂದಿದ್ದಾರೆ. ಅಷ್ಟೇ ಅಲ್ಲ, ಆತ ನೀಡಿದ ಫೋನ್ ನಂಬರ್ ಗೆ ನಮ್ಮ ತಂಡದವರೇ ಕರೆ ಮಾಡಿ ಕರೆಸುತ್ತಾರೆ ಎಂದು ಭರವಸೆ ಕೊಟ್ಟಿದ್ದಾರೆ! ಧಾರವಾಹಿಗೂ ಈ ಮಟ್ಟಿಗೆ ಹುಚ್ಚು ಅಭಿಮಾನ ಬೆಳೆಸಿಕೊಂಡವರ ಬಗ್ಗೆ ಏನನ್ನಬೇಕು?

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಹೆಸರಿನಲ್ಲಿ ಅಭಿಮಾನಿಯ ಅಶ್ಲೀಲ ಟ್ವೀಟ್: ಕಿಚ್ಚ ಸುದೀಪ್ ಫುಲ್ ಗರಂ