Publish Date: Mon, 01 Aug 2022 (10:10 IST)
Updated Date: Mon, 01 Aug 2022 (10:22 IST)
ಹೈದರಾಬಾದ್: ಕನ್ನಡ ಕಿರುತೆರೆಯ ಖ್ಯಾತ ನಟ ಚಂದನ್ ಕುಮಾರ್ ಗೆ ತೆಲುಗಿನಲ್ಲಿ ಸಾವಿತ್ರಮ್ಮ ಗಾರಿ ಅಬ್ಬಾಯಿ ಸೆಟ್ ನಲ್ಲಿ ಹಲ್ಲೆ ನಡೆದಿದೆ ಎಂಬ ವಿಡಿಯೋ ಒಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕನ್ನಡದಲ್ಲಿ ಲಕ್ಷ್ಮೀ ಬಾರಮ್ಮಾ, ಮನಸೆಲ್ಲಾ ನೀನೇ ಎಂಬಿತ್ಯಾದಿ ಧಾರವಾಹಿಗಳಲ್ಲಿ ನಟಿಸಿದ್ದಲ್ಲದೆ ಸಿನಿಮಾದಲ್ಲೂ ಅಭಿನಯಿಸಿ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿರುವ ಚಂದನ್ ತೆಲುಗು ಧಾರವಾಹಿಗಳಲ್ಲೂ ನಟಿಸಿದ್ದಾರೆ.
ಸಾವಿತ್ರಮ್ಮ ಧಾರವಾಹಿ ತಂತ್ರಜ್ಞರ ಜೊತೆ ಚಂದನ್ ಗೆ ಕಿರಿಕ್ ಆಗಿದೆ. ಈ ವೇಳೆ ಕ್ಯಾಮರಾ ಮ್ಯಾನ್ ಚಂದನ್ ಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ವೇಳೆ ಕೆಲವರು ಚಂದನ್ ಪರ ನಿಂತರೆ ತಂತ್ರಜ್ಞರೆಲ್ಲರೂ ಚಂದನ್ ಮೇಲೆ ಹರಿಹಾಯುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಬಗ್ಗೆ ಸ್ವತಃ ಚಂದನ್ ಸ್ಪಷ್ಟನೆ ನೀಡಬೇಕಿದೆ.