Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಕನ್ನಡ: ವೈಲ್ಡ್ ಕಾರ್ಡ್ ಎಂಟ್ರಿ ಪೃಥ್ವಿ ಬಗ್ಗೆ ಆರಂಭದಲ್ಲೇ ವೀಕ್ಷಕರ ಅಪಸ್ವರ

ಬಿಗ್ ಬಾಸ್ ಕನ್ನಡ: ವೈಲ್ಡ್ ಕಾರ್ಡ್ ಎಂಟ್ರಿ ಪೃಥ್ವಿ ಬಗ್ಗೆ ಆರಂಭದಲ್ಲೇ ವೀಕ್ಷಕರ ಅಪಸ್ವರ
ಬೆಂಗಳೂರು , ಸೋಮವಾರ, 4 ನವೆಂಬರ್ 2019 (10:34 IST)
ಬೆಂಗಳೂರು: ಈ ವಾರ ಬಿಗ್ ಬಾಸ್ ಮನೆಯಿಂದ ದುನಿಯಾ ರಶ್ಮಿ ಎಲಿಮಿನೇಟ್ ಆಗಿದ್ದು, ಅವರ ಬದಲಿಗೆ ಆರ್ ಜೆ ಪೃಥ್ವಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದಾರೆ.


ಆದರೆ ಆರ್ ಜೆ ಪೃಥ್ವಿ ಬಗ್ಗೆ ವೀಕ್ಷಕರು ಆರಂಭದಲ್ಲೇ ಅಪಸ್ವರವೆತ್ತಿದ್ದಾರೆ. ಪೃಥ್ವಿ ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸಿದ್ದು ವೀಕ್ಷಕರ ತಕರಾರಿಗೆ ಕಾರಣವಲ್ಲ. ಆದರೆ ಬಿಗ್ ಬಾಸ್ ಮನೆ ಪ್ರವೇಶಿಸುವ ಮೊದಲು ಕಿಚ್ಚ ಸುದೀಪ್ ಜತೆ ಅವರು ವೇದಿಕೆಯಲ್ಲಿ ನಡೆದುಕೊಂಡ ರೀತಿ ಕೆಲವರಿಗೆ ಇಷ್ಟವಾಗಿಲ್ಲ.

ಸುದೀಪ್ ವೇದಿಕೆ ಮೇಲೆ ಪೃಥ್ವಿಯವರನ್ನು ಪ್ರತೀ ಬಾರಿಯೂ ಪೃಥ್ವಿ ಅವರೇ, ಇಲ್ಲವೇ ಪೃಥ್ವಿ ಸರ್ ಎಂದೇ ಕರೆಯುತ್ತಿದ್ದರೆ, ಪೃಥ್ವಿ ಮಾತ್ರ ಪ್ರತೀ ಬಾರಿಯೂ ಸುದೀಪ್ ಎಂದೇ ಸಂಬೋಧಿಸುತ್ತಿದ್ದರು. ಇದು ಸುದೀಪ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಗೌರವ ಕೊಟ್ಟು ಮಾತನಾಡುವುದನ್ನು ಕಿಚ್ಚ ಸುದೀಪ್ ರಿಂದ ನೋಡಿ ಕಲಿಯಬೇಕು ಎಂದು ಪೃಥ್ವಿಗೆ ಅಭಿಮಾನಿಗಳು ಟಾಂಗ್ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಮನೆಯಿಂದ ಹೊರಬಂದ ಕೂಡಲೇ ಚಂದನ್ ಬಗ್ಗೆ ದುನಿಯಾ ರಶ್ಮಿ ಹೇಳಿದ್ದು ಏನು ಗೊತ್ತಾ?