Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಕನ್ನಡ: ವಿನ್ನರ್ ಆಗಬೇಕಿದ್ದ ರಾಜೀವ್ ಎಲಿಮಿನೇಟ್ ಆಗಿದ್ದೇಕೆ?!

ಬಿಗ್ ಬಾಸ್ ಕನ್ನಡ: ವಿನ್ನರ್ ಆಗಬೇಕಿದ್ದ ರಾಜೀವ್ ಎಲಿಮಿನೇಟ್ ಆಗಿದ್ದೇಕೆ?!
ಬೆಂಗಳೂರು , ಸೋಮವಾರ, 26 ಏಪ್ರಿಲ್ 2021 (09:16 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಈ ವಾರ ದೊಡ್ಡ ವಿಕೆಟ್ ಉರುಳಿದೆ. ಈ ಬಾರಿಯ ವಿನ್ನರ್ ಆಗಬಹುದು ಎಂದೇ ಲೆಕ್ಕಾಚಾರ ಹಾಕಿದ್ದ ಸ್ಪರ್ಧಿ ರಾಜೀವ್ ಎಲಿಮಿನೇಟ್ ಆಗಿದ್ದಾರೆ. ಇದು ವೀಕ್ಷಕರಿಗೆ ದೊಡ್ಡ ಶಾಕ್.


ಅಷ್ಟಕ್ಕೂ ರಾಜೀವ್ ಎಲಿಮಿನೇಟ್ ಆಗುವುದಕ್ಕೆ ಕಾರಣವೇನು? ವೀಕ್ಷಕರು ಸಾಮಾಜಿಕ ಜಾಲತಾಣದಲ್ಲಿ ವಿಶ್ಲೇಷಣೆ ನಡೆಸಿದ್ದು, ಅತಿಯಾದ ಕಾನ್ಫಿಡೆನ್ಸ್ ಹೊಂದಿದ್ದೇ ಅವರಿಗೆ ಮುಳುವಾಯ್ತು ಎಂದಿದ್ದಾರೆ.

ಕಳೆದ ವಾರ ಕ್ಯಾಪ್ಟನ್ ಅರವಿಂದ್ ರಾಜೀವ್ ರನ್ನು ನೇರವಾಗಿ ನಾಮಿನೇಟ್ ಮಾಡಿದ್ದರು. ಗೋಲ್ಡನ್ ಪಾಸ್ ಇದ್ದರೂ ಅದನ್ನು ಬಳಸದೇ ರಾಜೀವ್, ಓವರ್ ಕಾನ್ಫಿಡೆನ್ಸ್ ತೋರಿದರು. ಇದರಿಂದಾಗಿ ಬಿಗ್ ಬಾಸ್ ನಿಂದೇ ಹೊರ ಹೋಗುವ ಹಾಗಾಗಿದೆ.

ರಾಜೀವ್ ಹೊರಬಂದಿರುವುದು ಸಹ ಸ್ಪರ್ಧಿಗಳಿಗೂ ದೊಡ್ಡ ಶಾಕ್ ನೀಡಿದೆ. ಮನೆಗೆ ಬೆನ್ನುಲುಬಿನಂತಿದ್ದ ರಾಜೀವ್. ಅವನೇ ಹೋಗಿದ್ದಾನೆಂದರೆ ನಮ್ಮೆಲ್ಲರ ಕತೆಯೇನು ಎಂದು ಸ್ಪರ್ಧಿಗಳು ಮಾತನಾಡಲು ಆರಂಭಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಒಂದಾಗಲಿದೆಯಂತೆ ನಿರ್ದೇಶಕ ಸುಕುಮಾರ್ ಮತ್ತು ಸ್ಟಾರ್ ನಟ ರಾಮ್ ಚರಣ್ ಜೋಡಿ