Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಕನ್ನಡ: ಒಂದು ಸೇಬಿಗಾಗಿ ಮನೆಯೇ ಇಬ್ಬಾಗವಾಯಿತು!

ಬಿಗ್ ಬಾಸ್ ಕನ್ನಡ: ಒಂದು ಸೇಬಿಗಾಗಿ ಮನೆಯೇ ಇಬ್ಬಾಗವಾಯಿತು!
ಬೆಂಗಳೂರು , ಶುಕ್ರವಾರ, 25 ಅಕ್ಟೋಬರ್ 2019 (10:39 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ನಿನ್ನೆಯಿಡೀ ಒಂದು ಸೇಬಿಗಾಗಿ ಕಿತ್ತಾಟ ನಡೆದಿದೆ.

 

ಅಡುಗೆ ಮನೆಯ ಇನ್ ಚಾರ್ಜ್ ತೆಗೆದುಕೊಂಡಿರುವ ಸುಜಾತ ಅವರ ಪರ್ಮಿಷನ್ ತೆಗೆದುಕೊಳ್ಳದೇ ಸಹಾಯಕರಾಗಿರುವ ಚಂದನ್ ಆಚಾರ್ ಬಳಿ ಕೇಳಿ ಚೈತ್ರಾ ಕೋಟೂರು ಆಪಲ್ ಸೇವಿಸಿದ್ದು ಮನೆಯಲ್ಲಿ ಕಿತ್ತಾಟಕ್ಕೆ ಕಾರಣವಾಯಿತು. ಬೆಳಿಗ್ಗೆಯಿಂದಲೂ ಇದೇ ವಿಚಾರವಾಗಿ ಕಿರಿ ಕಿರಿ ಆರಂಭವಾಗಿತ್ತು.

ಆದರೆ ಸುಜಾತಗೆ ಈ ವಿಚಾರ ಗೊತ್ತೇ ಇರಲಿಲ್ಲ. ಹೀಗಾಗಿ ಕಾಮನ್ ಸೆನ್ಸ್ ಇಲ್ವಾ? ಯಾಕೆ ಒಪ್ಪಿಗೆ ಕೇಳದೇ ಬೇಕಾಗಿದ್ದನ್ನು ತೆಗೆದು ತಿಂತಾ ಇದ್ದೀರಾ? ಇನ್ನು ಮುಂದೆ ಯಾರೂ ಒಪ್ಪಿಗೆಯಿಲ್ಲದೇ ಅಡುಗೆ ಮನೆ ಪ್ರವೇಶಿಸಬಾರದು ಎಂದರು. ಈ ವೇಳೆ ಚಂದನ್ ನಾನು ಸುಜಾತ ಬಳಿ ಕೇಳಿ ತಿಂದೆ ಎಂದಿದ್ದೆ ಎಂದರು. ಜತೆಗೆ ಚಂದನ್ ಡೀಸೆನ್ಸಿ ಇಲ್ವಾ ಎಂದಿದ್ದು ಚೈತ್ರಾ ಸಿಟ್ಟಿಗೆ ಕಾರಣವಾಯಿತು.

ತೀರಾ ಕೂಗಾಡಿದ ಚೈತ್ರಾ ಬಳಿಕ ಅತ್ತಿದ್ದೂ ಆಯ್ತು, ಮನೆಯವರೆಲ್ಲಾ ಸಮಾಧಾನ ಮಾಡುವ ಸೀನ್ ಕೂಡಾ ಆಯ್ತು. ಹಾಗಿದ್ದರೂ ಯಾಕೋ ದಿನವಿಡೀ ಇದೇ ವಿಚಾರವೇ ಬಿಗ್ ಬಾಸ್ ಮನೆಯಲ್ಲಿ ಸುತ್ತಾಡುತ್ತಾ ಕೆಲವರು ಚಂದನ್ ಪರ, ಇನ್ನು ಕೆಲವರು ಚೈತ್ರಾ ಪರ ಮಾತನಾಡುತ್ತಿದ್ದುದು ಕಂಡುಬಂತು.

Share this Story:

Follow Webdunia kannada

ಮುಂದಿನ ಸುದ್ದಿ

ಸ್ವಿಜರ್ ಲ್ಯಾಂಡ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್