Publish Date: Tue, 23 Jan 2024 (09:19 IST)
Updated Date: Tue, 23 Jan 2024 (09:22 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ಕೊನೆಯ ಹಂತಕ್ಕೆ ಬಂದಿದ್ದು, ಸ್ಪರ್ಧಿಗಳಿಗೆ ತಮ್ಮ ಆಸೆ ಏನೆಂದು ತಿಳಿಸಲು ಬಿಗ್ ಬಾಸ್ ಸೂಚಿಸಿದ್ದಾರೆ.
ಅದರಂತೆ ಎಲ್ಲಾ ಸ್ಪರ್ಧಿಗಳು ಈ ಮನೆಯಲ್ಲಿ ತಮ್ಮ ಆಸೆ ಏನು ಎಂಬುದನ್ನು ತಿಳಿಸಿದ್ದಾರೆ. ಆದರೆ ಆ ಪೈಕಿ ಸಂಗೀತಾ ಶೃಂಗೇರಿ ದೊಡ್ಡ ದೊಡ್ಡ ಆಸೆಗಳನ್ನೇ ಬಿಗ್ ಬಾಸ್ ಮುಂದೆ ತೆರೆದಿಟ್ಟಿದ್ದಾರೆ.
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ ಮತ್ತು ಕಿರಣ್ ರಾಜ್ ಮನೆಗೆ ಬಂದಿದ್ದರೆ ಚೆನ್ನಾಗಿರುತ್ತಿತ್ತು ಎಂದಿದ್ದಾರೆ. 777 ಚಾರ್ಲಿ ಸಿನಿಮಾದಲ್ಲಿ ಸಂಗೀತಾ ನಾಯಕಿಯಾಗಿದ್ದರು. ಹೀಗಾಗಿ ಅದೇ ಸ್ನೇಹದಿಂದ ಈ ಮೂವರನ್ನೂ ನೋಡುವ ಬಯಕೆಯನ್ನು ಹೊರಹಾಕಿದ್ದಾರೆ. ಅಷ್ಟೇ ಅಲ್ಲ, ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರಿಂದ ಒಂದು ಸ್ಪೂರ್ತಿಯುತ ಸಂದೇಶ ಬಂದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹೇಳಿದ್ದಾರೆ. ಆದರೆ ಈ ಆಸೆಗಳನ್ನು ಬಿಗ್ ಬಾಸ್ ನೆರವೇರಿಸುತ್ತಾ ಕಾದು ನೋಡಬೇಕು.
ಆದರೆ ಮನೆಯ ಇತರೆ ಸದಸ್ಯರು ಸರಳವಾದ ಆಸೆಗಳನ್ನೇ ತೆರೆದಿಟ್ಟರು. ಕಾರ್ತಿಕ್ ತಮ್ಮ ಸಹೋದರಿ ಜೊತೆ ಮಾತನಾಡಲು ಅವಕಾಶ ಕೊಡಿ ಎಂದು ಕೇಳಿಕೊಂಡರೆ ವಿನಯ್ ಮನೆಯವರೆಲ್ಲರ ಮೀಮ್ಸ್ ನೋಡುವ ಆಸೆ ವ್ಯಕ್ತಪಡಿಸಿದರು. ತುಕಾಲಿ ಸಂತೋಷ್ ಉಂಡೆಕೋಳಿ ತಿನ್ನಬೇಕು ಎಂದರು. ಡ್ರೋಣ್ ಪ್ರತಾಪ್ ಐದು ನಿಮಿಷವಾದರೂ ಮನೆಯ ಕ್ಯಾಪ್ಟನ್ ಆಗಲು ಅವಕಾಶ ಕೊಡಿ ಎಂದು ಬೇಡಿಕೆಯಿಟ್ಟಿದ್ದಾರೆ.