Select Your Language

Notifications

webdunia
webdunia
webdunia
webdunia

ಐಪಿಎಲ್ ನಲ್ಲಿ ಆರ್ ಸಿಬಿ ಸೋಲಲು ಅಗ್ನಿಸಾಕ್ಷಿ ಧಾರವಾಹಿಯೇ ಕಾರಣವಂತೆ! ಹೇಗೆ ಗೊತ್ತಾ?!

ಐಪಿಎಲ್ ನಲ್ಲಿ ಆರ್ ಸಿಬಿ ಸೋಲಲು ಅಗ್ನಿಸಾಕ್ಷಿ ಧಾರವಾಹಿಯೇ ಕಾರಣವಂತೆ! ಹೇಗೆ ಗೊತ್ತಾ?!
ಬೆಂಗಳೂರು , ಗುರುವಾರ, 28 ಫೆಬ್ರವರಿ 2019 (09:30 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯ ಅಗ್ನಿಸಾಕ್ಷಿ ಧಾರವಾಹಿ ಮತ್ತೆ ಪ್ರೇಕ್ಷಕರ ಟ್ರೋಲ್ ಗೆ ತುತ್ತಾಗಿದೆ. ಈಗ ವಿಲನ್ ಚಂದ್ರಿಕಾ ಬಣ್ಣ ಬಯಲಾಗಿದೆ. ಇನ್ನಾದರೂ ಸೀರಿಯಲ್ ಮುಗಿಸಿ ಎಂದು ಪ್ರೇಕ್ಷಕರು ಗೋಳು ಹೊಯ್ದುಕೊಳ್ಳುತ್ತಿದ್ದಾರೆ.


ಇನ್ನೇನು ಐಪಿಎಲ್ ಶುರುವಾಗುತ್ತದೆ. ಅದೂ ಅಗ್ನಿಸಾಕ್ಷಿ ಧಾರವಾಹಿ ಪ್ರಸಾರವಾಗುವ ಎಂಟು ಗಂಟೆ ಹೊತ್ತಿಗೇ ಮ್ಯಾಚ್ ನಡೆಯುತ್ತದೆ. ಐಪಿಎಲ್ ಗೆ ಮೊದಲು ಅಗ್ನಿಸಾಕ್ಷಿ ಮುಗಿದಿಲ್ಲ ಎಂದರೆ ನಮಗೆ ಅಮ್ಮ ರಿಮೋಟ್ ಕೊಡಲ್ಲ ಎಂದು ಕೆಲವು ವೀಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಗೋಳು ಹೇಳಿಕೊಂಡಿದ್ದಾರೆ.

ಇನ್ನು, ಕೆಲವರು ಇನ್ನೂ ಅಗ್ನಿಸಾಕ್ಷಿ ಮುಗಿಸಿಲ್ಲಾಂದ್ರೆ ಸೆಟ್ ಗೇ ಬಂದು ಸರ್ಜಿಕಲ್ ಸ್ಟ್ರೈಕ್ ಮಾಡಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ. ಆರ್ ಸಿಬಿ ತಂಡ ಐಪಿಎಲ್ ನಲ್ಲಿ ಪ್ರತೀ ಬಾರಿ ಸೋಲಲು ಅಗ್ನಿಸಾಕ್ಷಿಯೇ ಕಾರಣ ಎಂದು ಕೆಲವು ವೀಕ್ಷಕರು ಹೊಸ ಆರೋಪ ಮಾಡಿದ್ದಾರೆ. ಅದಕ್ಕೆ ಕಾರಣ ನಾವು ಧಾರವಾಹಿ ನೋಡಲು ಬಿಡಲ್ಲ ಅಂತ ಆರ್ ಸಿಬಿ ಮೇಲೆ ಮನೆಯಲ್ಲಿರುವ ಹೆಣ್ಣು ಮಕ್ಕಳು ಶಾಪ ಹಾಕುತ್ತಿರುತ್ತಾರೆ ಎಂದೂ ಕೆಲವರು ಹೊಸ ಬಾಂಬ್ ಸಿಡಿಸಿದ್ದಾರೆ!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕರೀನಾ ಕಪೂರ್ ಮತ್ತೆ ಗರ್ಭಿಣಿ! ಉಬ್ಬು ಹೊಟ್ಟೆ ದರ್ಶನ ಮಾಡಿದ ಬಾಲಿವುಡ್ ನಟಿ