Select Your Language

Notifications

webdunia
webdunia
webdunia
webdunia

ಪತ್ನಿಯ ದೂರಿನಿಂದ ನೊಂದಿದ್ದೇನೆ, ಇನ್ಮುಂದೆ ಏನೂ ಪ್ರಶ್ನೆ ಮಾಡ್ಬೇಡಿ ಎಂದ ನಟ ರಾಜೇಶ್ ಧ್ರುವ

ಪತ್ನಿಯ ದೂರಿನಿಂದ ನೊಂದಿದ್ದೇನೆ, ಇನ್ಮುಂದೆ ಏನೂ ಪ್ರಶ್ನೆ ಮಾಡ್ಬೇಡಿ ಎಂದ ನಟ ರಾಜೇಶ್ ಧ್ರುವ
ಬೆಂಗಳೂರು , ಭಾನುವಾರ, 24 ಫೆಬ್ರವರಿ 2019 (08:55 IST)
ಬೆಂಗಳೂರು: ಪತ್ನಿಗೆ ಗೃಹ ಹಿಂಸೆ ನೀಡಿದ ಕೇಸ್ ನಲ್ಲಿ ಸಿಕ್ಕಿಹಾಕಿಕೊಂಡಿರುವ ಅಗ್ನಿಸಾಕ್ಷಿ ಧಾರವಾಹಿ ಖ್ಯಾತಿಯ ನಟ ರಾಜೇಶ್ ಧ್ರುವ ಸೋಷಿಯಲ್ ಮೀಡಿಯಾ ಮೂಲಕ ಸಾರ್ವಜನಿಕರಿಗೆ ಮನವಿಯೊಂದನ್ನು ಮಾಡಿದ್ದಾರೆ.


ಇದು ನನ್ನ ವೈಯಕ್ತಿಕ ಸಮಸ್ಯೆ. ಇದರ ಬಗ್ಗೆ ಇನ್ನು ಯಾವುದೇ ಮಾಧ‍್ಯಮಗಳಿಗೆ, ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡಲ್ಲ. ಏನೇ ಇದ್ದರೂ ಕಾನೂನಿನ ಮೂಲಕ ಕೋರ್ಟ್ ನಲ್ಲೇ ಬಗೆಹರಿಸಿಕೊಳ್ಳುತ್ತೇವೆ ಎಂದಿದ್ದಾರೆ.

ನಾನು ಹಿಂದೆ ಹೇಳಿರುವುದು ಮತ್ತು ಇನ್ನು ಮುಂದೆ ಹೇಳುವ ಉತ್ತರಗಳೂ ಒಂದೇ ಆಗಿರುತ್ತದೆ. ನಾನು ಹೇಳಿದ್ದೆಲ್ಲವೂ ಸತ್ಯ. ಇನ್ನು ಮುಂದೆ ಯಾವುದೇ ಸಾರ್ವಜನಿಕ ಹೇಳಿಕೆ ಕೊಡಲ್ಲ. ಘಟನೆಯಿಂದ ನಾನು ತುಂಬಾ ನೊಂದಿದ್ದೇನೆ. ನನ್ನ ತಾಯಿಯ ಕಾಳಜಿ ವಹಿಸಬೇಕಿದೆ ಎಂದು ರಾಜೇಶ್ ಮನವಿ ಮಾಡಿದ್ದಾರೆ.

ರಾಜೇಶ್ ವಿರುದ್ಧ ಆರೋಪ ಕೇಳಿಬರುತ್ತಿದ್ದಂತೆ ಹಲವರು ಅವರ ಫೇಸ್ ಬುಕ್ ಪೇಜ್ ಮುಖಾಂತರ ಟ್ರೋಲ್ ಮಾಡಿದ್ದರು. ಈ ಎಲ್ಲಾ ಬೆಳವಣಿಗೆ ನಂತರ ಇದೀಗ ಸ್ಪಷ್ಟನೆ ಬರೆದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಕೀರ್ತನ್ ಹೊಳ್ಳ ಸರಿಗಮಪ ಚಾಂಪಿಯನ್, ಹನುಮಂತಪ್ಪ ರನ್ನರ್ ಅಪ್