Select Your Language

Notifications

webdunia
webdunia
webdunia
webdunia

ಬ್ಯಾಡ್ಮಿಂಟನ್ ಆಟಗಾರ್ತಿ ಸಿಂಧು ‘ಕೌನ್ ಬನೇಗಾ ಕರೋಡಪತಿ’ ಯಲ್ಲಿ ಗೆದ್ದ ಹಣವನ್ನು ಕೊಟ್ಟಿದ್ದು ಯಾರಿಗೆ ಗೊತ್ತಾ…?

ಬ್ಯಾಡ್ಮಿಂಟನ್ ಆಟಗಾರ್ತಿ ಸಿಂಧು ‘ಕೌನ್ ಬನೇಗಾ ಕರೋಡಪತಿ’ ಯಲ್ಲಿ ಗೆದ್ದ ಹಣವನ್ನು ಕೊಟ್ಟಿದ್ದು ಯಾರಿಗೆ ಗೊತ್ತಾ…?
ಹೈದರಾಬಾದ್ , ಭಾನುವಾರ, 14 ಜನವರಿ 2018 (05:55 IST)
ಹೈದರಾಬಾದ್ : ಬ್ಯಾಡ್ಮಿಂಟನ್ ಆಟಗಾರ್ತಿ, ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ಅವರು ‘ಕೌನ್ ಬನೇಗಾ ಕರೋಡಪತಿ’ ಕಾರ್ಯಕ್ರಮವೊಂದರಲ್ಲಿ ಗೆದ್ದ ಹಣವನ್ನು ಕ್ಯಾನ್ಸರ್ ಆಸ್ಪತ್ರೆಯೊಂದಕ್ಕೆ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

 
ಬಾಲಿವುಡ್ ನ ಖ್ಯಾತ ನಟ ಅಮಿತಾಭ್ ಬಚ್ಚನ್ ಅವರು ನಡೆಸಿಕೊಡುತ್ತಿದ್ದ ‘ಕೌನ್ ಬನೇಗಾ ಕರೋಡಪತಿ’ ಕಾರ್ಯಕ್ರಮವೊಂದರಲ್ಲಿ ಸಿಂಧು ಅವರು ಭಾಗವಹಿಸಿದ್ದು, ಅದರಲ್ಲಿ ಗೆದ್ದ 25 ಲಕ್ಷ ರೂ. ಗಳನ್ನು ಬಸವತಾರಕಂ ಇಂಡೋ ಅಮೇರಿಕನ್ ಕ್ಯಾನ್ಸರ್ ಆಸ್ಪತ್ರೆಗೆ ದಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ.

 
ಆಸ್ಪತ್ರೆಯ ಮುಖ್ಯಸ್ಥರಾದ ಟಾಲಿವುಡ್ ನಟ ಬಾಲಯ್ಯ ಅವರು ಸಿಂಧು ಅವರ ಮಾನವೀಯತೆಯ ಗುಣವನ್ನು ಹೊಗಳಿದ್ದು, ಅವರ ಈ ಕಾರ್ಯ  ಇತರರಿಗೂ ಮಾದರಿಯಾಗಿದೆ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದ್ವಿತೀಯ ಟೆಸ್ಟ್ ಗೆ ಭುವನೇಶ್ವರ್ ಕುಮಾರ್ ಹೊರಗಿಟ್ಟು ಇಶಾಂತ್ ಶರ್ಮಾಗೆ ಮಣೆ ಹಾಕಿದ್ದು ಯಾಕೆ ಗೊತ್ತಾ?