Select Your Language

Notifications

webdunia
webdunia
webdunia
webdunia

ನಟ ಶಿವರಾಜ್ ಕುಮಾರ್ ತನ್ನ ಪುಟ್ಟ ಅಭಿಮಾನಿಯನ್ನು ನೋಡಲು ಮೈಸೂರಿಗೆ ಹೋಗಿದ್ದಾದರೂ ಯಾಕೆ ಗೊತ್ತಾ...?

ನಟ ಶಿವರಾಜ್ ಕುಮಾರ್ ತನ್ನ ಪುಟ್ಟ ಅಭಿಮಾನಿಯನ್ನು ನೋಡಲು ಮೈಸೂರಿಗೆ ಹೋಗಿದ್ದಾದರೂ ಯಾಕೆ ಗೊತ್ತಾ...?
ಮೈಸೂರು , ಭಾನುವಾರ, 14 ಜನವರಿ 2018 (05:29 IST)
ಮೈಸೂರು : ಸ್ಯಾಡಲ್ ವುಡ್ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಅಪಘಾತದಲ್ಲಿ ಕಾಲು ಕಳೆದುಕೊಂಡ ತಮ್ಮ ಪುಟ್ಟ ಅಭಿಮಾನಿಯೊಬ್ಬನನ್ನು ನೋಡಲು ಶನಿವಾರ ಮೈಸೂರಿಗೆ ತೆರಳಿದ್ದಾರೆ.

 
ಸುಮಾರು 7 ತಿಂಗಳ ಹಿಂದೆ ಬಸ್ ಕಂಡಕ್ಟರ್ ನ ನಿರ್ಲಕ್ಷ್ಯದಿಂದ ಬಸ್ ನಿಂದ ಕೆಳಗೆ ಬಿದ್ದು ಕಾಲು ಕಳೆದುಕೊಂಡ ಬಾಲಕ ಉಲ್ಲೇಖ್, ಆಸ್ಪತ್ರೆಯಲ್ಲಿರುವಾಗಲೇ ತನ್ನ ನೆಚ್ಚಿನ ನಟ ಶಿವರಾಜ್ ಕುಮಾರ್ ಅವರನ್ನು ನೋಡಬೇಕು ಎಂದು ಹಂಬಲಿಸುತ್ತಿದ್ದು, ಈ ವಿಷಯವನ್ನು ಮಾಧ್ಯಮಗಳ ಮೂಲಕ ತಿಳಿದುಕೊಂಡ ಶಿವರಾಜ್ ಕುಮಾರ್ ಅವರು ಆತನನ್ನು ಭೇಟಿ ಮಾಡಲು ಮೈಸೂರಿನ ಸರಸ್ವತಿಪುರಂನಲ್ಲಿರುವ ಆತನ ಮನೆಗೆ ಹೋಗಿ ಯೋಗಕ್ಷೇಮ ವಿಚಾರಿಸಿದ್ದಾರೆ.



‘ಜೀವನದಲ್ಲಿ ಒಮ್ಮೆ ಅನಿರೀಕ್ಷಿತ ಕ್ಷಣ ಬರುತ್ತದೆ. ಧೈರ್ಯವಾಗಿ ಜೀವನದಲ್ಲಿ ಮುನ್ನುಗ್ಗಬೇಕು ‘ ಎಂದು ಶಿವರಾಜ್ ಕುಮಾರ್ ಅವರು ಬಾಲಕನಿಗೆ ಧೈರ್ಯ ತುಂಬಿದ್ದಾರೆ. ತನ್ನ ನೆಚ್ಚಿನ ನಟನನ್ನು ಕಂಡು  ಉಲ್ಲೇಖ್ ಕೂಡ ಸಂತೋಷಗೊಂಡಿದ್ದಾನೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಕನ್ನಡ: ವೀಕ್ಷಕರ ಲೆಕ್ಕಾಚಾರ ತಪ್ಪಲಿಲ್ಲ! ರಿಯಾಜ್ ಭಾಷಾ ಉಳಿಯಲಿಲ್ಲ!