Select Your Language

Notifications

webdunia
webdunia
webdunia
webdunia

ಹಸುವನ್ನು ಕೊಂದ ಹುಲಿಯ ಮೇಲೆ ಪ್ರತಿಕಾರ ತೀರಿಸಿಕೊಂಡು ಜೈಲು ಸೇರಿದ ಯುವಕರು

ಹಸುವನ್ನು ಕೊಂದ ಹುಲಿಯ ಮೇಲೆ ಪ್ರತಿಕಾರ ತೀರಿಸಿಕೊಂಡು ಜೈಲು ಸೇರಿದ ಯುವಕರು
ಕೊಯಮತ್ತೂರು , ಶುಕ್ರವಾರ, 23 ಏಪ್ರಿಲ್ 2021 (06:42 IST)
ಕೊಯಮತ್ತೂರು : ನೀಲ್ ಗ್ರಿಸ್ ನ ಮುದುಮಲೈ ಟೈಗರ್ ರಿಸರ್ವ್ ನ ಸಿಂಗರಾ ಅರಣ್ಯ ಶ್ರೇಣಿಯಲ್ಲಿ ಹುಲಿಗೆ ವಿಷ ನೀಡಿ ಸಾಯಿಸಿದ ಆರೋಪ ಮೇಲೆ ಇಬ್ಬರನ್ನು ತಮಿಳುನಾಡು ಅರಣ್ಯ ಇಲಾಖೆ ಬಂಧಿಸಿದೆ.

7 ವರ್ಷದ ಹುಲಿಯ ಮೃತದೇಹ ಪತ್ತೆಯಾದ ಹಿನ್ನಲೆಯಲ್ಲಿ  ಅದನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿಯಲ್ಲಿ ಹುಲಿ ಸಾವಿಗೆ ವಿಷದ ಆಹಾರ ಕಾರಣ ಎಂಬುದು ತಿಳಿದುಬಂದಿದೆ. ಬಳಿಕ ಪೊಲೀಸರು ವಿಶೇಷ ತಂಡವನ್ನು ರಚಿಸಿ ಈ ಬಗ್ಗೆ ತನಿಖೆ ನಡೆಸಿದ್ದಾರೆ.

ಆ ವೇಳೆ ನಾಲ್ವರು ತನ್ನ ಹಸುಗಳ ಸಾವಿಗೆ ಕಾರಣವಾದ ಹುಲಿಯ ಮೇಲೆ ಪ್ರತಿಕಾರ ತೀರಿಸಿಕೊಳ್ಳಲು ಹುಲಿಗೆ ಹಸುವಿನ ವಿಷದ ಶವವನ್ನು ನೀಡಿರುವುದಾಗಿ ತಿಳಿದುಬಂದಿದೆ. ಈಗಾಗಲೇ ಇಬ್ಬರನ್ನು ಬಂಧಿಸಿದ ಪೊಲೀಸರು ಮತ್ತಿಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶವ ಸಂಸ್ಕಾರಕ್ಕೆ ಬಂದವರು ಸಿಟಿ ರವಿ ವಿರುದ್ಧ ಕಿಡಿಕಾರಿದ್ದೇಕೆ?