Select Your Language

Notifications

webdunia
webdunia
webdunia
webdunia

ರವೀಂದ್ರ ಜಡೇಜಾ ಚೇತರಿಕೆಗೆ ವಿಶ್ ಮಾಡಲು ಹುಲಿ ಬಂತು!

ರವೀಂದ್ರ ಜಡೇಜಾ ಚೇತರಿಕೆಗೆ ವಿಶ್ ಮಾಡಲು ಹುಲಿ ಬಂತು!
ಮುಂಬೈ , ಭಾನುವಾರ, 21 ಮಾರ್ಚ್ 2021 (09:59 IST)
ಮುಂಬೈ: ಟೀಂ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾ ಸದ್ಯಕ್ಕೆ ಗಾಯದ ಕಾರಣದಿಂದ ಕ್ರಿಕೆಟ್ ನಿಂದ ದೂರವಿದ್ದಾರೆ. ಬಿಡುವಿನ ವೇಳೆಯಲ್ಲಿ ಅವರು ಜಂಗಲ್ ಸಫಾರಿ ಮಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.


ಬಿಡುವಿದ್ದಾಗ ಕಾಡಿನ ಕಡೆಗೆ ಪ್ರಯಾಣ ಬೆಳೆಸುವ ಹವ್ಯಾಸ ಬೆಳೆಸಿಕೊಂಡಿರುವ ರವೀಂದ್ರ ಜಡೇಜಾ ಮತ್ತೊಂದು ಜಂಗಲ್ ಸಫಾರಿ ಮಾಡುವ ವಿಡಿಯೋವೊಂದನ್ನು ಪ್ರಕಟಿಸಿದ್ದಾರೆ. ಈ ವಿಡಿಯೋದಲ್ಲಿ ಹುಲಿಯೊಂದು ಜಡೇಜಾ ದಾರಿಗಡ್ಡವಾಗಿ ಬರುತ್ತದೆ.

ಇದನ್ನು ತೋರಿಸಿ ಜಡೇಜಾ ‘ನೋಡಿ ನಾನು ಬೇಗ ಗುಣಮುಖನಾಗಲೆಂದು ವಿಶ್ ಮಾಡಲು ಹುಲಿ ಬಂದಿದೆ’ ಎಂದು ಬರೆದುಕೊಂಡಿದ್ದಾರೆ. ಆಸ್ಟ್ರೇಲಿಯಾ ಸರಣಿ ವೇಳೆ ಗಾಯಗೊಂಡಿದ್ದ ಜಡೇಜಾ ಇಂಗ್ಲೆಂಡ್ ಸರಣಿಗೆ ತಂಡಕ್ಕೆ ಆಯ್ಕೆಯಾಗಿರಲೇ ಇಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವದಲ್ಲಿ ಮುಂದುವರಿಯಲಿರುವ ಶ್ರೇಯಸ್ ಐಯರ್