Select Your Language

Notifications

webdunia
webdunia
webdunia
webdunia

ಅಂಡಾಣು ಮಾರಿಕೊಳ್ಳಲು ಸ್ನೇಹಿತೆ, ಗಂಡನಿಂದ ಮಹಿಳೆಗೆ ಒತ್ತಾಯ: ಆರೋಪಿಗಳು ಅರೆಸ್ಟ್

ಅಂಡಾಣು ಮಾರಿಕೊಳ್ಳಲು ಸ್ನೇಹಿತೆ, ಗಂಡನಿಂದ ಮಹಿಳೆಗೆ ಒತ್ತಾಯ: ಆರೋಪಿಗಳು ಅರೆಸ್ಟ್
ತಿರುವನಂತಪುರಂ , ಗುರುವಾರ, 21 ಜುಲೈ 2022 (08:50 IST)
ತಿರುವನಂತಪುರಂ: ಹಣಕ್ಕಾಗಿ ಅಂಡಾಣು ಮಾರಿಕೊಳ್ಳಲು ವಿವಾಹಿತ ಮಹಿಳೆಗೆ ಆಕೆಯ ಸ್ನೇಹಿತೆ ಮತ್ತು ಆಕೆಯ ಗಂಡ ಕಿರುಕುಳ ಕೊಟ್ಟ ಘಟನೆ ಕೇರಳದಲ್ಲಿ ನಡೆದಿದೆ.

2 ವರ್ಷದ ಮಗುವಿನ ತಾಯಿಯಾಗಿರುವ ಸಂತ್ರಸ್ತ ಮಹಿಳೆ ಗಂಡನೊಂದಿಗೆ ಜಗಳ ಮಾಡಿಕೊಂಡು ಸ್ನೇಹಿತೆ ಮನೆಗೆ ಬಂದಿದ್ದಳು. ಆರಂಭದಲ್ಲಿ ಆಕೆಯನ್ನು ಆದರದಿಂದ ಸ್ವಾಗತಿಸಿದ್ದ ಸ್ನೇಹಿತೆ ಬಳಿಕ ಗಂಡನ ಜೊತೆ ಸೇರಿಕೊಂಡು ಸಂತ್ರಸ್ತೆಯನ್ನು ರೂಂನಲ್ಲಿ ಕೂಡಿ ಹಾಕಿದ್ದಳು.

ಬಳಿಕ ಹಣಕ್ಕಾಗಿ ಅಂಡಾಣು ಮಾರಾಟ ಮಾಡುವಂತೆ ಚಿತ್ರಹಿಂಸೆ ನೀಡಿದ್ದಳು. ಕೊನೆಗೆ ಗಂಡ-ಹೆಂಡತಿ ಮನೆಯಲ್ಲಿಲ್ಲದಿದ್ದಾಗ ಅದು ಹೇಗೋ ತಪ್ಪಿಸಿಕೊಂಡು ಮರಳಿ ಗಂಡನ ಬಳಿ ಬಂದ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ. ಇದೀಗ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೀದಿಬದಿ ವ್ಯಾಪಾರಿಗಳನ್ನ ಕಡೆಗಣಿಸಿದ ಸರ್ಕಾರದ ವಿರುದ್ಧ ವ್ಯಾಪಾರಿಗಳ ಆಕ್ರಂದನ