Select Your Language

Notifications

webdunia
webdunia
webdunia
webdunia

ಮಿತ್ರನ ಕಳೆದುಕೊಂಡ ಬಿಜೆಪಿ ಸಹಾಯಕ್ಕೆ ಪವನ್ ಕಲ್ಯಾಣ್ ಬರುತ್ತಾರಾ?!

ಮಿತ್ರನ ಕಳೆದುಕೊಂಡ ಬಿಜೆಪಿ ಸಹಾಯಕ್ಕೆ ಪವನ್ ಕಲ್ಯಾಣ್ ಬರುತ್ತಾರಾ?!
ಹೈದರಾಬಾದ್ , ಶನಿವಾರ, 17 ಮಾರ್ಚ್ 2018 (09:32 IST)
ಹೈದರಾಬಾದ್: ಟಿಡಿಪಿ ಜತೆ ಮೈತ್ರಿ ಕಳೆದುಕೊಂಡು ಬರಿದಾಗಿರುವ ಬಿಜೆಪಿ ಸಹಾಯಕ್ಕೆ ಪವನ್ ಕಲ್ಯಾಣ್ ಬರುತ್ತಾರಾ? ಈ ಬಗ್ಗೆ ಮಾಧ್ಯಮಗಳಿಗೆ ನಟ, ಜನ ಸೇನಾ ಪಕ್ಷದ ನೇತಾರ ಪವನ್ ಕಲ್ಯಾಣ್ ಉತ್ತರಿಸಿದ್ದಾರೆ.
 

ಹಿಂದಿನ ಚುನಾವಣೆಯಲ್ಲಿ ಪವನ್ ಬಿಜೆಪಿ ಪರ ಪ್ರಚಾರ ಮಾಡಿದ್ದರು. ಆದರೆ ಇತ್ತೀಚೆಗೆ ಅವರಿಗೆ ಬಿಜೆಪಿ ಮೇಲೆ ಒಲವಿಲ್ಲ. ಮೊನ್ನೆಯಷ್ಟೇ ಕೇಂದ್ರದ ಮೇಲೆ ಹರಿಹಾಯ್ದಿದ್ದರು.

ಹೀಗಾಗಿ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಬಿಲ್ ಕುಲ್ ಇಲ್ಲ ಎಂದಿದ್ದಾರೆ. ‘ಬಿಜೆಪಿ ಬಗ್ಗೆ ಇದೀಗ ಆಂಧ್ರದಲ್ಲಿ ನೆಗೆಟಿವ್ ಇಮೇಜ್ ಇದೆ. ಈ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿ ಇದೀಗ ಇಲ್ಲಿನ ಯಾವ ಪಕ್ಷವೂ ಇಲ್ಲ’ ಎಂದು ಖಡಕ್ ಆಗಿ ಹೇಳಿದ್ದಾರೆ. ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡಲು ನಿರಾಕರಿಸಿದ ಕೇಂದ್ರದ ಮೇಲೆ ಎಲ್ಲಾ ಪಕ್ಷಗಳೂ ಗರಂ ಆಗಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟ್ವಿಟರ್ ಮೂಲಕ ಗಳಿಸಬಹುದಾಗಿದ್ದ ಗೌರವವನ್ನು ಟ್ವಿಟರ್ ನಿಂದಲೇ ಕಳೆದುಕೊಂಡ ಬಿಜೆಪಿ