Webdunia - Bharat's app for daily news and videos

Install App

ಫಾರೂಕ್‌ ಅಬ್ದುಲ್ಲಾ ಮನೆಗೆ ನುಗ್ಗಲು ಯತ್ನಿಸಿದ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ಯಾಕೆ?

Webdunia
ಶನಿವಾರ, 4 ಆಗಸ್ಟ್ 2018 (13:26 IST)
ಜಮ್ಮು: ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಅವರ ಮನೆಗೆ ಆಪರಿಚಿತನೊಬ್ಬ ನುಗ್ಗಲು ಯತ್ನಿಸಿದ್ದು , ಆತನನ್ನು ಭದ್ರತಾ ಸಿಬ್ಬಂದಿಗಳು ಗುಂಡಿಕ್ಕಿ ಹತ್ಯೆಗೈದ ಘಟನೆ ಶನಿವಾರ ಮುಂಜಾನೆ ನಡೆದಿದೆ.


ಅಪರಿಚತನು ಮುಖ್ಯ ಗೇಟ್‌ ಉಲ್ಲಂಘನೆ ಮಾಡಿ ಒಳ ನುಗ್ಗಿದ್ದಾನೆ. ಭದ್ರತಾ ಸಿಬ್ಬಂದಿಗಳೊಂದಿಗೆ ಹೊಡೆದಾಟ ಕೂಡ ನಡೆಸಿದ್ದಾನೆ. ಕೂಡಲೇ ಆತನ ಮೇಲೆ ಗುಂಡು ಹಾರಿಸಲಾಯಿತು ಎಂದು ಎಸ್‌ಎಸ್‌ಪಿ ವಿವೇಕ್‌ ಗುಪ್ತಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಇದು ಉಗ್ರ ದಾಳಿ ಎಂದು ಕಾಣುವುದಿಲ್ಲ ಎಂದು ಅವರು ಹೇಳಿದ್ದಾರೆ. 

ಹತ್ಯೆಗೀಡಾದ ವ್ಯಕ್ತಿ ಪೂಂಚ್‌ನ ನಿವಾಸಿ ಮುರ್ಫಾಸ್‌ ಶಾ ಎನ್ನುವವನಾಗಿದ್ದು, ಈತ ಎಸ್‌ಯುವಿ ಕಾರಿನಲ್ಲಿ ಮುಖ್ಯ ವಿಐಪಿ ಗೇಟ್‌ ದಾಟಿ ಮನೆಯ ಬಾಗಿಲಿಗೆ ತೆರಳಿದ್ದ ಎಂದು ತಿಳಿದು ಬಂದಿದೆ. 

ನನ್ನ ಮಗನನ್ನು ಬಂಧಿಸಬಹುದಿತ್ತು. ಗುಂಡಿಕ್ಕಿ ಹತ್ಯೆ ಮಾಡಿದ್ದೇಕೆ? ಭದ್ರತಾ ಸಿಬ್ಬಂದಿ ಗೇಟ್‌ನಲ್ಲಿ ಇದ್ದಿದ್ದರೆ ನನ್ನ ಮಗ ಒಳಗೆ ಹೇಗೆ ಹೋಗುತ್ತಿದ್ದ. ಭದ್ರತೆಯ ಲೋಪ ಎದ್ದು ಕಾಣುತ್ತಿದೆ . ದಿನ ಅವನು ಜಿಮ್‌ಗೆ ಹೋಗುತ್ತಿದ್ದ. ಇಂದೂ ಕೂಡ ಹೋಗಿದ್ದಾನೆ. ಆತನನ್ನು ಹತ್ಯೆಮಾಡಿದ್ದೇಕೆ ಎಂದು ಮಾಧ್ಯಮದವರ ಬಳಿ ಮುರ್ಫಾಸ್‌ ತಂದೆ ನೋವು ತೋಡಿಕೊಂಡಿದ್ದಾರೆ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

GoodNews: ಒಂದನೇ ತರಗತಿ ಸೇರ್ಪಡೆ ವಯೋಮಿತಿ ಗೊಂದಲಕ್ಕೆ ತೆರೆ ಎಳೆದ ಸಚಿವ ಮಧುಬಂಗಾರಪ್ಪ

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

ಸೋನಿಯಾ, ರಾಹುಲ್ ವಿರುದ್ಧ ಇಡಿ ಜಾರ್ಜ್‌ಶೀಟ್‌: ಮೋದಿ, ಶಾ ವಿರುದ್ಧ ಪ್ರತಿಭಟನೆಗೆ ಕೈಜೋಡಿಸಿ ಎಂದ ಸಿದ್ದರಾಮಯ್ಯ

ಹರಿಯಾಣ: ಅನೈತಿಕ ಸಂಬಂಧಕ್ಕೆ ಅಡ್ಡಿ ಬಂದ ಪತಿಯನ್ನೇ ಮುಗಿಸಿದ ಪತ್ನಿ

Viral video: ಪುರಿ ಜಗನ್ನಾಥ ಮಂದಿರದಲ್ಲಿ ವಿಸ್ಮಯ: ಕೇಸರಿ ವಸ್ತ್ರ ಹೊತ್ತು ದೇಗುಲಕ್ಕೆ ಸುತ್ತು ಹಾಕಿದ ಗರುಡ ಹೋಗಿದ್ದೆಲ್ಲಿಗೆ

ಮುಂದಿನ ಸುದ್ದಿ
Show comments