Select Your Language

Notifications

webdunia
webdunia
webdunia
webdunia

ಮಾಜಿ ಪತ್ನಿಯನ್ನು ಕೊಲೆ ಮಾಡಿದ ಆರೋಪವನ್ನು ಮುಚ್ಚಿ ಹಾಕಲು ಮಾಜಿ ಪತಿ ಮಾಡಿದ ಖತರ್ನಾಕ್ ಐಡಿಯಾ ಏನು ಗೊತ್ತಾ?

ಮಾಜಿ ಪತ್ನಿಯನ್ನು ಕೊಲೆ ಮಾಡಿದ ಆರೋಪವನ್ನು ಮುಚ್ಚಿ ಹಾಕಲು ಮಾಜಿ ಪತಿ ಮಾಡಿದ  ಖತರ್ನಾಕ್ ಐಡಿಯಾ ಏನು ಗೊತ್ತಾ?
ಗೋರಖ್ ಪುರ , ಮಂಗಳವಾರ, 25 ಡಿಸೆಂಬರ್ 2018 (10:58 IST)
ಗೋರಖ್ ಪುರ : ಮಾಜಿ ಪತ್ನಿಯನ್ನು ಕೊಲೆ ಮಾಡಿ ಆ ಆರೋಪದಿಂದ ತಪ್ಪಿಸಿಕೊಳ್ಳಲು ಆಕೆಯ ಮಾಜಿ ಪತಿ ಮಾಡಿದ ಖತರ್ನಾಕ್ ಐಡಿಯಾವನ್ನು ಕೇಳಿದ್ರೆ ಶಾಕ್ ಆಗ್ತೀರಾ?


ಡಾ. ಧಮೇಂದ್ರ ಪ್ರತಾಪ್​ ಸಿಂಗ್ ಕೊಲೆ ಮಾಡಿದ ಆರೋಪಿಯಾಗಿದ್ದು, ರಾಖಿ ಶ್ರೀವಾಸ್ತವ ಕೊಲೆಯಾದ ಮಾಜಿ ಪತ್ನಿ. ಧಮೇಂದ್ರ ಪ್ರತಾಪ್​ ಸಿಂಗ್ ಆರು ತಿಂಗಳ ಹಿಂದೆ ನೇಪಾಳದ ಪೋಖ್ರಾದಲ್ಲಿ ಬಂಡೆಯೊಂದನ್ನು ತಳ್ಳಿ ಹಾಕಿ ಕೊಲೆ ಮಾಡಿದ್ದು, ಅದನ್ನು ಮುಚ್ಚಿ ಹಾಕಲು ತನ್ನ ಗೆಳೆಯನ ಜೊತೆ ಸೇರಿ ಸಾಮಾಜಿಕ ಜಾಲತಾಣ ಖಾತೆಗಳಿಂದ ಪೋಸ್ಟ್ ಮಾಡುತ್ತಿದ್ದ.


ಆದರೆ ರಾಖಿ ಶ್ರೀವಾಸ್ತವ ನಾಪತ್ತೆಯಾಗಿದ್ದಾಳೆ ಎಂದು ಆಕೆಯ ಸಹೋದರ ಅಮರ್ ಪ್ರಕಾಶ್ ಶ್ರೀವಾಸ್ತವ ದೂರು ನೀಡಿದ್ದ ಹಿನ್ನಲೆಯಲ್ಲಿ ತನಿಖೆ ಆರಂಭಿಸಿದ ಪೊಲೀಸರಿಗೆ ರಾಖಿ ಶ್ರೀವಾಸ್ತವ ನೇಪಾಳದಲ್ಲಿದ್ದಾಗ ಮಾಜಿ ಪತಿ ಧಮೇಂದ್ರ ಪ್ರತಾಪ್ ಸಿಂಗ್ ಸಹ ನೇಪಾಳದಲ್ಲಿದ್ದಿದ್ದು ಆತನ  ಕಾಲ್ ಲಿಸ್ಟ್ ನಿಂದ ತಿಳಿದುಬಂದಿದೆ. ನಂತರ ರಾಖಿ ಶ್ರೀವಾಸ್ತವ ಮೃತದೇಹ ಪತ್ತೆ ಹಚ್ಚಿದ ಪೊಲೀಸರು ಧಮೇಂದ್ರ ಪ್ರತಾಪ್​ ಸಿಂಗ್ ಹಾಗೂ ಆತನ ಸ್ನೇಹಿತನನ್ನು ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಎಸ್ ಮುಖಂಡನ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ ದುಷ್ಕರ್ಮಿಗಳು