Select Your Language

Notifications

webdunia
webdunia
webdunia
webdunia

ಕೋಲ್ಕತ್ತಾ ವೈದ್ಯೆ ಹತ್ಯೆಗೆ ಟ್ವಿಸ್ಟ್: ಸಂತ್ರಸ್ತೆಯ ಪೋಷಕರಿಂದ ಶಾಕಿಂಗ್ ಹೇಳಿಕೆ

Kolkata

Krishnaveni K

ಕೋಲ್ಕತ್ತಾ , ಗುರುವಾರ, 5 ಸೆಪ್ಟಂಬರ್ 2024 (10:00 IST)
ಕೋಲ್ಕತ್ತಾ: ಆರ್ ಜಿ ಕರ್ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಮೇಲೆ ನಡೆದ ರೇಪ್ ಆಂಡ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪೋಷಕರು ಈಗ ಶಾಕಿಂಗ್ ಹೇಳಿಕೆ ನೀಡಿದ್ದು ಪೊಲೀಸರ ಮೇಲೆಯೇ ಅನುಮಾನ ಪಡುವಂತಾಗಿದೆ.

ಕೋಲ್ಕತ್ತಾ ರೇಪ್ ಆಂಡ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜಯ್ ರಾಯ್ ಎಂಬಾತನನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗುತ್ತಿದೆ. ಸಿಸಿಟಿವಿ ದೃಶ್ಯದಲ್ಲಿ ಈತ ಘಟನೆ ಸಂದರ್ಭದಲ್ಲಿ ಸೆಮಿನಾರ್ ಹಾಲ್ ನೊಳಗೆ ಹೋಗುವುದು ಮತ್ತು ಬರುವುದು ಅಲ್ಲದೆ, ಆತನ ಬ್ಲೂ ಟೂತ್ ಸೆಟ್ ಕೂಡಾ ಮೃತದೇಹದ ಪಕ್ಕ ಸಿಕ್ಕಿತ್ತು. ಈ ಕಾರಣಕ್ಕೆ ಆತನೇ ಆರೋಪಿ ಎಂದು ತನಿಖೆಗೊಳಪಡಿಸಲಾಗುತ್ತಿದೆ.

ಆದರೆ ಆತ ಮೊದಲಿನಿಂದಲೂ ನಾನು ಆರೋಪಿಯಲ್ಲ. ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎನ್ನುತ್ತಿದ್ದಾನೆ. ಆದರೆ ಸಾಕ್ಷ್ಯಗಳು ಆತನಿಗೆ ವಿರುದ್ಧವಾಗಿದೆ. ಇದರ ನಡುವೆ ಸಂತ್ರಸ್ತೆಯ ಪೋಷಕರು ಪೊಲೀಸರ ಮೇಲೆಯೇ ಗಂಭೀರ ಆರೋಪ ಮಾಡಿದ್ದಾರೆ.  ಮೊದಲು ತನಿಖೆ ನಡೆಸುತ್ತಿದ್ದ ಕೋಲ್ಕತ್ತಾ ಪೊಲೀಸರು ನಮಗೆ ಹಣ ನೀಡಲು ಪ್ರಯತ್ನಿಸಿದ್ದರು ಎಂದಿದ್ದಾರೆ.

ನಮಗೆ ಮಗಳ ಮೃತದೇಹವನ್ನು ನೋಡಲು ಕೆಲವು ಸಮಯ ಕಾಯಿಸಲಾಯಿತು. ಬಳಿಕ ಅವಕಾಶ ಸಿಕ್ಕಿತು. ನಮಗೆ ಮೃತದೇಹ ನೀಡಿದ ಬಳಿಕ ಕೋಲ್ಕತ್ತಾದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹಣದ ಆಮಿಷವೊಡ್ಡಿದರು. ಆದರೆ ತಕ್ಷಣವೇ ನಾವು ಅದನ್ನು ನಿರಾಕರಿಸಿದೆವು ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಅವರ ಈ ಆರೋಪದಿಂದಾಗಿ ಈ ಪ್ರಕರಣದಲ್ಲಿ ಪ್ರಭಾವಿಗಳ ಕೈವಾಡವಿರಬಹುದೇ ಎಂದು ಸಂಶಯ ಹೆಚ್ಚುವಂತೆ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಣೇಶ ಹಬ್ಬದ ಪ್ರಸಾದಕ್ಕೂ ರಾಜ್ಯ ಸರ್ಕಾರದ ಕಡಿವಾಣ: ಹಿಂದೂಗಳಿಂದ ಆಕ್ರೋಶ