Webdunia - Bharat's app for daily news and videos

Install App

ಮಾರುವೇಷದಲ್ಲಿ ಬಂದು ಕೇರಳ ಸಂತ್ರಸ್ತರಿಗೆ ನೆರವಾದ ಆ ವ್ಯಕ್ತಿ ಯಾರು ಗೊತ್ತಾ?!

Webdunia
ಶುಕ್ರವಾರ, 7 ಸೆಪ್ಟಂಬರ್ 2018 (08:57 IST)
ತಿರುವನಂತಪುರಂ: ಇತ್ತೀಚೆಗಿನ ದಿನಗಳಲ್ಲಿ ಅಧಿಕಾರ ಸಿಕ್ಕಿತೆಂದರೆ ತಾನು ನಿಂತ ನೆಲ ಮರೆಯುವವರೇ ಹೆಚ್ಚು. ಅಂತಹದ್ದರಲ್ಲಿ ಈ ಐಎಎಸ್ ಅಧಿಕಾರಿ ತವರಿನ ಋಣ ತೀರಿಸಿದ ಕತೆ ಕೇಳಿದರೆ ಹೆಮ್ಮೆಯೆನಿಸುತ್ತದೆ.

ಕಣ್ಣನ್ ಗೋಪಿನಾಥನ್ ಎಂಬ ಕೇರಳ ಮೂಲದ ಐಎಎಸ್ ಅಧಿಕಾರಿ ಇದೀಗ ದಾದ್ರಾ ಮತ್ತು ನಗರ್ ಹವೇಲಿಯಲ್ಲಿ ಜಿಲ್ಲಾಧಿಕಾರಿ. ಆದರೆ ಅವರು ತಮ್ಮ ತವರು ಕೇರಳದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹದಲ್ಲಿ ಸಂತ್ರಸ್ತರಾದವರಿಗಾಗಿ ತಮ್ಮ ಅಧಿಕಾರ, ಪ್ರತಿಷ್ಟೇಯನ್ನೂ ಮರೆತು ಮೂಟೆ ಹೊರುವ ಕೆಲಸ ಮಾಡಿದ್ದಾರೆ.

ಆಗಸ್ಟ್ 26 ರಂದು ಕೇರಳಕ್ಕೆ ಬಂದು ಕೊಚ್ಚಿ ಬಂದರಿನಲ್ಲಿ ಪರಿಹಾರ ಸಾಮಗ್ರಿಗಗಳನ್ನು ಇಳಿಸಿ ಸಾಮಾನ್ಯ ಮೂಟೆ ಹೊರುವವನಂತೆ ಹೆಗಲ ಮೇಲೆ ಹೊತ್ತು ಸಾಗಿಸಿದ್ದಾರೆ. ಸುಮಾರು ಒಂಭತ್ತು ದಿನ ಪರಿಹಾರ ಕಾರ್ಯ ಮಾಡಿದ ನಂತರ ಇವರು ಐಎಎಸ್ ಅಧಿಕಾರಿ ಎಂದು ಸ್ಥಳೀಯರಿಗೆ ಗೊತ್ತಾಗಿದೆ.

ತಾವು ಜಿಲ್ಲಾಧಿಕಾರಿಯಾಗಿರುವ ಜಿಲ್ಲೆಯ ಪರವಾಗಿ 1 ಕೋಟಿ ರೂ. ಚೆಕ್ ನ್ನು ಸರ್ಕಾರಕ್ಕೆ ಹಸ್ತಾಂತರಿಸಿದ ಅವರು ತಿರುವನಂತರಪುರಂಗೆ ಬಸ್ ‍ನಲ್ಲಿ ಸಾಗಿ ಅಲ್ಲಿಂದ ಪ್ರವಾಹದಿಂದ ತೀವ್ರ ಸಂಕಷ್ಟದಲ್ಲಿದ್ದ ಚಿಂಗನೂರಿಗೆ ಭೇಟಿ ನೀಡಿ ಅಲ್ಲಿನ ನೆರೆ ಸಂತ್ರಸ್ತರಿಗೆ ನೆರವಾಗಿದ್ದಾರೆ.

ಇಷ್ಟೆಲ್ಲಾ ಮಾಡಿದ ಮೇಲೂ ನಾನು ಸಾಮಾನ್ಯ ವ್ಯಕ್ತಿ. ವಿಶೇಷವಾದ್ದೇನೂ ಮಾಡಿಲ್ಲ ಎಂದು ವಿನಮ್ರವಾಗಿ ಹೇಳಿಕೊಂಡಿದ್ದಾರೆ. ಸರ್ಕಾರಿ ಕೆಲಸ ಎಂಬ ಹಣೆಪಟ್ಟಿ ಸಿಕ್ಕ ಕೂಡಲೇ ಮೈಮರೆಯುವರೇ ಇರುವಾಗ ಇಂತಹ ಅಧಿಕಾರಿಗೆ ಸೆಲ್ಯೂಟ್ ನೀಡಲೇಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Sonia Gandhi: ಮತ್ತೇ ಆಸ್ಪತ್ರೆಗೆ ಭೇಟಿ, ಕಾಂಗ್ರೆಸ್‌ನ ಹಿರಿಯ ನಾಯಕಿಯ ಆರೋಗ್ಯ ಈಗ ಹೀಗಿದೆ

ಹಸಿವು, ನಿರುದ್ಯೋಗದಿಂದ ಬಳಲುತ್ತಿದ್ದರು ಪಾಕ್‌ ಭಯೋತ್ಪಾದನೆ ಬಿಡುತ್ತಿಲ್ಲ: ಸಚಿವ ನಿತಿನ್ ಗಡ್ಕರಿ ಆಕ್ರೋಶ

ಅಧಿಕಾರದಲ್ಲಿ ಮುಂದುವರೆಯಲು ಸಿಎಂ, ಡಿಸಿಎಂಗೆ ಯಾವುದೇ ನೈತಿಕತೆಯಿಲ್ಲ: ಪ್ರಹ್ಲಾದ್ ಜೋಶಿ ಆಕ್ರೋಶ

Bengaluru Stampede: ಈ ದುರಂತದಿಂದ ರಾಜ್ಯ ಸರ್ಕಾರ ಪಾಠ ಕಲಿತಿದೆ, ಡಿಸಿಎಂ ಡಿಕೆ ಶಿವಕುಮಾರ್‌

Bengaluru Stampede: ಅಮಾನತುಗೊಂಡ ಐಪಿಎಸ್ ಅಧಿಕಾರಿಯಿಂದ ಹೊಸ ಹೆಜ್ಜೆ

ಮುಂದಿನ ಸುದ್ದಿ
Show comments