Webdunia - Bharat's app for daily news and videos

Install App

ಕುಂಭಮೇಳಕ್ಕೆ ಹೋದರೆ ಮಾಡಲೇಬೇಕಾದ ಕೆಲಸಗಳು

Krishnaveni K
ಶುಕ್ರವಾರ, 17 ಜನವರಿ 2025 (11:35 IST)
ಪ್ರಯಾಗ್ ರಾಜ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದೆ. ಇದಕ್ಕೆ ಕೋಟ್ಯಾಂತರ ಮಂದಿ ಹೋಗುತ್ತಿದ್ದಾರೆ. ಕುಂಭಮೇಳಕ್ಕೆ ಹೋದರೆ ನೀವು ಈ ಕೆಲಸಗಳನ್ನು ಮಾಡಲು ಮರೆಯದಿರಿ.
 

ಗಂಗಾನದಿಯ ತಟದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಈ ಬಾರಿ 40 ಕೋಟಿಗೂ ಅಧಿಕ ಮಂದಿ ಆಗಮಿಸುವ ನಿರೀಕ್ಷೆಯಿದೆ. ಈಗಾಗಲೇ ಕೋಟ್ಯಾಂತರ ಮಂದಿ ಕುಂಭಮೇಳಕ್ಕೆ ಹೋಗಿ ಬಂದಿದ್ದಾರೆ. ಇಲ್ಲಿಗೆ ಹೋದರೆ ಮುಖ್ಯವಾಗಿ ನೀವು ಮಾಡಲೇಬೇಕಾದ ಕೆಲಸಗಳೇನು ನೋಡೋಣ.

ಪುಣ್ಯಸ್ನಾನ
ಕುಂಭಮೇಳಕ್ಕೆ ಹೋಗುವುದೇ ಗಂಗಾ ನದಿಯಲ್ಲಿ ಪುಣ್ಯ ಸ್ನಾನ ಮಾಡುವ ಉದ್ದೇಶದಿಂದ. ಗಂಗೆ ನಮ್ಮ ಪಾಪಗಳನ್ನು ತೊಡೆದು ಹಾಕುತ್ತಾಳೆ ಎಂಬ ನಂಬಿಕೆಯಿದೆ. ಅಂತಹದ್ದರಲ್ಲಿ ಇಲ್ಲಿ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡುವುದು ಬಹಳ ವಿಶೇಷವಾಗಿದೆ. ಗಂಗಾ, ಯಮುನಾ, ಸರಸ್ವತಿ ಎಂಬ ಮೂರು ಪುಣ್ಯ ನದಿಗಳ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವುದರಿಂದ ಪಾಪ ಕಳೆದು ಮೋಕ್ಷ ಸಿಗುತ್ತದೆ ಎಂಬ ನಂಬಿಕೆಯಿದೆ.

ನಾಗಾಸಾಧುಗಳನ್ನು ಭೇಟಿ ಮಾಡಿ
ನಾಗಾಸಾಧುಗಳೆಂದರೆ ಮಹಾನ್ ತಪಸ್ವಿಗಳು. ಅವರು ತಮ್ಮ ಜೀವನವನ್ನಿಡೀ ಭಗವಂತನ ನಾಮಸ್ಮರಣೆಯಲ್ಲೇ ಕಳೆಯುತ್ತಾರೆ. ಅವರು ಕಾಣಸಿಗುವುದೇ ಕುಂಭಮೇಳದ ಸಂದರ್ಭದಲ್ಲಿ. ಅವರ ಜೀವನ ಶೈಲಿಯೇ ವಿಶೇಷವಾದುದು. ಅಂತಹ ನಾಗಾಸಾಧುಗಳನ್ನು ನೋಡಲು ಇದು ಸದವಕಾಶವಾಗಿದೆ.

ಪ್ರಯಾಗ್ ರಾಜ್ ನ ಸೌಂದರ್ಯ ಸವಿಯಬಹುದು
2025 ರ ಕುಂಭಮೇಳಕ್ಕಾಗಿಯೇ ಪ್ರಯಾಗ್ ರಾಜ್ ನಲ್ಲಿ ಗಂಗಾನದಿ ತಟವನ್ನು ವಿಶೇಷ ನಗರಿಯಾಗಿ ನಿರ್ಮಿಸಲಾಗಿದೆ. ಇದಲ್ಲದೆ ಪ್ರಯಾಗ್ ರಾಜ್ ನಲ್ಲಿ ಬಡೆ ಹನುಮಾನ್ ದೇವಾಲಯ, ಅಕ್ಬರನ ಕೋಟೆ ಸೇರಿದಂತೆ ಅನೇಕ ಐತಿಹಾಸಿಕ ಸ್ಥಳಗಳನ್ನು ವೀಕ್ಷಣೆ ಮಾಡಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Jammu Kashmir attack: ಜಮ್ಮು ಕಾಶ್ಮೀರದಲ್ಲಿ ರೆಸಾರ್ಟ್ ಮೇಲೆ ಪಾಕ್ ಉಗ್ರರ ದಾಳಿ: ಇಬ್ಬರ ಸಾವು, ಪ್ರವಾಸಿಗರಲ್ಲಿ ಭಯ

ಪ್ರಜ್ವಲ್‌ ರೇವಣ್ಣಗೆ ಕೋರ್ಟ್‌ನಲ್ಲಿ ಮತ್ತೊಂದು ಹಿನ್ನಡೆ: ಮಾಜಿ ಸಂಸದನಿಗೆ ಪರಪ್ಪನ ಅಗ್ರಹಾರವೇ ಗತಿ

ಸಂಸತ್ತೇ ನಮ್ಮ ದೇಶದಲ್ಲಿ ಸುಪ್ರೀಂ: ವಿವಾದದ ಬೆನ್ನಲ್ಲೇ ಮತ್ತೆ ಗುಡುಗಿದ ಉಪರಾಷ್ಟ್ರಪತಿ ಜಗದೀಪ್ ಧನಕರ್‌

ಕೋರ್ಟ್‌ ವಾತಾವರಣ ಹಾಳು ಮಾಡಿದ ವಕೀಲನಿಗೆ ₹5 ಲಕ್ಷ ದಂಡ ವಿಧಿಸಿ ಬುದ್ಧಿ ಕಲಿಸಿದ ಸುಪ್ರೀಂ ಕೋರ್ಟ್‌

ಯುಪಿಎಸ್‌ಸಿ ಫಲಿತಾಂಶ ಪ್ರಕಟ: 1009 ಮಂದಿ ನೇಮಕಾತಿ, ಟಾಪರ್‌ ಶಕ್ತಿ ದುಬೆ ಓದಿದ್ದೇನು ಗೊತ್ತಾ

ಮುಂದಿನ ಸುದ್ದಿ
Show comments