Publish Date: Sun, 02 Jan 2022 (13:45 IST)
Updated Date: Sun, 02 Jan 2022 (13:49 IST)
ಹೈದರಾಬಾದ್ : ಆಗ್ರಾ ಸಮೀಪದ ಖಂಡೌಲಿಯ ಆರು ಎಕರೆ ಆಲೂಗಡ್ಡೆ ಬೆಳೆಗಾರ ಮೊಹಮ್ಮದ್ ಅಲಂಗೀರ್, ಅಸಾದುದ್ದೀನ್ ಒವೈಸಿ ಮೇಲೆ ಕೋಪಗೊಂಡಿದ್ದಾರೆ.
ಒವೈಸಿಯವರ ಹೈದರಾಬಾದ್ ಮೂಲದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗಿಳಿದಿರುವುದಕ್ಕೆ ಅಲಂಗೀರ್ ಕೋಪಗೊಂಡಿಲ್ಲ.
ಉತ್ತರ ಪ್ರದೇಶದ ಆಲೂಗಡ್ಡೆ ಆಮದು ನಿಷೇಧಕ್ಕೆ ಒವೈಸಿ ಪಕ್ಷ ಬೆಂಬಲಿಸಿರುವುದಕ್ಕೆ ಆಲೂಗಡ್ಡೆ ಬೆಳೆಯುವ ರೈತರಿಗೆ ಸಿಟ್ಟು ಬಂದಿದೆ.
“ನಮ್ಮ ಆಲೂಗಡ್ಡೆಯನ್ನು ತೆಲಂಗಾಣದಲ್ಲಿ ನಿರ್ಬಂಧಿಸಿದ ತೆಲಂಗಾಣ ರಾಷ್ಟ್ರ ಸಮಿತಿಯ ಸರ್ಕಾರವನ್ನು ಬೆಂಬಲಿಸಿದ ಒವೈಸಿ ಇಲ್ಲಿ ಯಾಕೆ ಪ್ರಚಾರ ಮಾಡುತ್ತಿದ್ದಾರೆ ಎಂದು ಆಗ್ರಾದ ಆಲೂ ಉತ್ಪಾದಕ್ ಕಿಸಾನ್ ಸಮಿತಿಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಅಲಂಗೀರ್ ಕೇಳುತ್ತಾರೆ.