Publish Date: Sun, 06 Sep 2020 (18:58 IST)
Updated Date: Sun, 06 Sep 2020 (19:00 IST)
ಆತನ ಮದುವೆಯಾಗಿ ಬರೋಬ್ಬರಿ ಎಂಟ್ಹತ್ತು ದಿನಗಳೂ ಕಳೆದಿರಲಿಲ್ಲ. ಅಷ್ಟರಲ್ಲಾಗಲೇ ಕೈ ಹಿಡಿದ ಪತ್ನಿಗೆ ತಲಾಖ್ ಕೊಟ್ಟಿದ್ದಾನೆ.
ಕೇಳಿದಷ್ಟು ವರದಕ್ಷಿಣೆ ನೀಡಲಿಲ್ಲ ಎನ್ನೋ ಕಾರಣಕ್ಕೆ ಮದುವೆಯಾದ ಎಂಟ್ಹತ್ತು ದಿನಗಳಲ್ಲೇ ಪತಿಯೊಬ್ಬ ತನ್ನ ಪತ್ನಿಗೆ ತಲಾಖ್ ನೀಡಿದ್ದಾನೆ.
ಪತಿ ಸದ್ದಾಂ ಹಾಗೂ ಆತನ ಕುಟುಂಬದವರು ಪತ್ನಿ ಶಬನಂ ಕುಟುಂಬದವರಿಗೆ ವರದಕ್ಷಿಣೆ ಹಣ ಹಾಗೂ ಕಾರ್ ಗಾಗಿ ಬೇಡಿಕೆ ಇಟ್ಟಿದ್ದರು ಎನ್ನಲಾಗುತ್ತಿದೆ.
ಈಗ ಪತಿ ಸದ್ದಾಂ ಹಾಗೂ ಆತನ ಕುಟುಂಬದವರ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್ ದಾಖಲಾಗಿದೆ.
ಉತ್ತರಪ್ರದೇಶದ ಹಸನಪುರ್ ದಲ್ಲಿ ಘಟನೆ ನಡೆದಿದ್ದು, ಪೊಲೀಸರು ತನಿಖೆ ಶುರುಮಾಡಿದ್ಧಾರೆ.