Publish Date: Wed, 05 Jan 2022 (10:20 IST)
Updated Date: Wed, 05 Jan 2022 (10:34 IST)
ರಾಂಚಿ: ಹಣ, ಆಸ್ತಿ ಮುಂದೆ ಹೆತ್ತ ಸಂಬಂಧವೂ ಏನೂ ಅಲ್ಲ ಎಂದು ಈ ಮಗ ನಿರೂಪಿಸಿದ್ದಾನೆ. ಆಸ್ತಿಗಾಗಿ ತನ್ನ ವಯೋವೃದ್ಧ ತಂದೆಯನ್ನೇ ಕೊಂದಿದ್ದಾನೆ. ಜಾರ್ಖಂಡ್ ನಲ್ಲಿ ಈ ಘಟನೆ ನಡೆದಿದೆ.
ತನ್ನ ಕಿರಿಯ ಸಹೋದರನಿಗೆ ಆಸ್ತಿಯಲ್ಲಿ ತನಗಿಂತ ಹೆಚ್ಚು ಪಾಲು ನೀಡಲಾಗಿದೆ ಎಂದು ಆರೋಪಿಗೆ ಸಂಶಯವಿತ್ತು. ಇದೇ ಕಾರಣಕ್ಕೆ ತಂದೆಯೊಂದಿಗೆ ಜಗಳವಾಡಿದ್ದ.
ಇದೇ ಸಿಟ್ಟಿನಲ್ಲಿ 70 ವರ್ಷದ ತಂದೆಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಆದರೆ ಬಳಿಕ ತಪ್ಪಿಸಿಕೊಳ್ಳಲೆತ್ನಿಸಿದ್ದಾನೆ. ಪೊಲೀಸರು ಹಿರಿಯ ಪುತ್ರನ ಮೇಲೆ ಅನುಮಾನಗೊಂಡು ವಿಚಾರಣೆ ನಡೆಸಿದಾಗ ಕೃತ್ಯ ಬಯಲಿಗೆ ಬಂದಿದೆ. ಇದೀಗ ಆರೋಪಿಯನ್ನು ಬಂಧಿಸಲಾಗಿದೆ.