Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿಗೆ ಸಚಿವೆ ಸ್ಮೃತಿ ಇರಾನಿಯ ವಿಶಿಷ್ಟ ತಿರುಗೇಟು

ರಾಹುಲ್ ಗಾಂಧಿಗೆ ಸಚಿವೆ ಸ್ಮೃತಿ ಇರಾನಿಯ ವಿಶಿಷ್ಟ ತಿರುಗೇಟು
ನವದೆಹಲಿ , ಭಾನುವಾರ, 15 ಅಕ್ಟೋಬರ್ 2017 (08:41 IST)
ನವದೆಹಲಿ: ಹಸಿವು ಸೂಚ್ಯಂಕ ಪಟ್ಟಿಯಲ್ಲಿ ಭಾರತ ಶೋಚನೀಯ ಪರಿಸ್ಥಿತಿಗೆ ತಲುಪಿದ ಹಿನ್ನಲೆಯಲ್ಲಿ ಕಾವ್ಯಾತ್ಮಕವಾಗಿ ಕೇಂದ್ರ ಸರ್ಕಾರವನ್ನು ಟೀಕಿಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಸಚಿವೆ ಸ್ಮೃತಿ ಇರಾನಿ ಅದೇ ಧಾಟಿಯಲ್ಲಿ ತಿರುಗೇಟ ನೀಡಿದ್ದಾರೆ.

 
ಶುಕ್ರವಾರ ಭಾರತದ ಪರಿಸ್ಥಿತಿ ಬಗ್ಗೆ ಕೇಂದ್ರ ಸರ್ಕಾರಕ್ಕೆ ರಾಹುಲ್ ಗಾಂಧಿ ಕವಿ ದುಶ್ಯಂತ್ ಕುಮಾರ್ ಸಿಂಗ್ ಕವಿತೆಗಳ ಮೂಲಕ ಚಾಟಿ ಬೀಸಿದ್ದರು. ಇದಕ್ಕೆ ಮತ್ತೊಂದು ಕವಿತೆ ಮೂಲಕ ತಿರುಗೇಟು ನೀಡಿರುವ ಸಚಿವೆ ಸ್ಮೃತಿ ರಾಹುಲ್, ದೇಶದ ಮಾನ ಹರಾಜು ಹಾಕುತ್ತಿದ್ದಾರೆ ಎಂದಿದ್ದಾರೆ.

‘ಅಧಿಕಾರದ ಹಸಿವು ನೀಗಿಸಲು ನೀವು ಕಾಯಲೇಬೇಕು, ನಿಮ್ಮ ಜತೆ ಸಂಖ್ಯೆಯ ಬಲವಿಲ್ಲ, ಎಲ್ಲಾ ಸ್ವಾರ್ಥ ಜನರನ್ನು ಒಗ್ಗೂಡಿಸಿ ದೇಶದ ಮಾನ ಕಳೆಯಿರಿ’ ಎಂಬ ಅರ್ಥ ಬರುವಂತಹ ಕವಿತೆಯೊಂದನ್ನು ಸಚಿವೆ ಸ್ಮೃತಿ ತಮ್ಮ ಟ್ವಿಟರ್ ನಲ್ಲಿ ಬರೆದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವ ರೋಷನ್ ಬೇಗ್ ಮೇಲೆ ನಟ ಜಗ್ಗೇಶ್ ಕಿಡಿ