Select Your Language

Notifications

webdunia
webdunia
webdunia
webdunia

ಕೋಪದಲ್ಲಿ ಬ್ಯಾಟ್‍ನಿಂದ ಹೊಡೆದು ಪತ್ನಿಯನ್ನು ಕೊಂದ! ಮುಂದೇನಾಯ್ತು?

ಕೋಪದಲ್ಲಿ ಬ್ಯಾಟ್‍ನಿಂದ ಹೊಡೆದು ಪತ್ನಿಯನ್ನು ಕೊಂದ! ಮುಂದೇನಾಯ್ತು?
ಚೆನ್ನೈ , ಸೋಮವಾರ, 3 ಜನವರಿ 2022 (09:31 IST)
ಚೆನ್ನೈ  : ಕೋಪದ ಭರದಲ್ಲಿ ಬ್ಯಾಟ್ನಿಂದ ಹೊಡೆದು ಪತ್ನಿಯನ್ನು ಕೊಂದು, ಪುತ್ರರರ ಕತ್ತು ಹಿಸುಕಿ ಕೊಲೆಗೈದು ನಂತರ ತಾನು ನೇಣಿಗೆ ಶರಣಾದ ಘಟನೆ ಪೆರುಂಗುಡಿಯಲ್ಲಿ ನಡೆದಿದೆ.
ಮಣಿಕಂದನ್(35), ತರಗ ಪ್ರಿಯಾ(30), ಮಕ್ಕಳಾದ ತರಣ್ (11) ಮತ್ತು ಒಂದೂವರೆ ವರ್ಷದ ತಗನ್ ಮೃತರಾಗಿದ್ದಾರೆ. ಪೊಲೀಸರ ಪ್ರಕಾರ, ಮಣಿಕಂದನ್ ಖಾಸಗಿ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದ. ಮಕ್ಕಳು, ಪತ್ನಿಯನ್ನುಕೊಂದು ತಾನೂ ಆತ್ಮಹತ್ಯೆಮಾಡಿಕೊಂಡಿದ್ದಾನೆ. 

ಪೆರುಂಗುಡಿಯಲ್ಲಿ ಅಪಾರ್ಟ್ ಮೆಂಟ್ನಲ್ಲಿ  ಮಣಿಕಂದನ್ ಕುಟುಂದೊಂದಿಗೆ ವಾಸವಾಗಿದ್ದರು. ಮನೆಯ ಬಾಗಿಲು ಮುಚ್ಚಿದ್ದರಿಂದ ಅನುಮಾನಗೊಂಡ ನೆರೆಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು,  ಪೊಲೀಸರು ಮನೆಯ ಬಾಗಿಲು ಹೊಡೆದು ನೋಡಿದಾಗ ಮಣಿಕಂದನ್ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಕಂಡಿತ್ತು. 

ದಂಪತಿ ನಡುವೆ ಸಾಲದ ವಿಚಾರವಾಗಿ ಆಗಾಗ ಜಗಳ ನಡೆಯುತ್ತಿತ್ತು. ಕೋಪದ ಭರದಲ್ಲಿ ಮಣಿಕಂದನ್ ಬ್ಯಾಟ್ನಿಂದ ಹೊಡೆದು ತನ್ನ ಹೆಂಡತಿ ಕೊಂದಿದ್ದಾನೆ. ನಂತರ ಮಕ್ಕಳನ್ನು ಕೊಂದು ತಾನೂ ನೇಣು ಹಾಕಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಅಪರಾಧ ನಡೆದ ಸ್ಥಳವನ್ನು ನೋಡಿದಾಗ, ಮಣಿಕಂದನ್ ಮೊದಲು ತನ್ನ ಹೆಂಡತಿಯನ್ನು ಕೊಲೆ ಮಾಡಿ ನಂತರ ತನ್ನ ಇಬ್ಬರು ಗಂಡುಮಕ್ಕಳನ್ನು ಕತ್ತು ಹಿಸುಕಿ ಕೊನೆಗೆ ನೇಣು ಹಾಕಿಕೊಂಡಿರಬೇಕು, ತನಿಖೆ ಮಾಡುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ತೆಂಗಿನ ಕಾಯಿ ಕಳ್ಳನಿಗೆ ಥಳಿತದ ಶಿಕ್ಷೆ