Publish Date: Thu, 18 Oct 2018 (11:52 IST)
Updated Date: Thu, 18 Oct 2018 (11:53 IST)
ಮುಂಬೈ: ಉದಯೋನ್ಮುಖ ಮಾಡೆಲ್ ಮಾನಸಿ ದೀಕ್ಷಿತ್ ಮುಂಬೈನಲ್ಲಿ ಕೊಲೆಯಾಗಿದ್ದಕ್ಕೆ ನಿಜ ಕಾರಣ ಬಯಲಾಗಿದೆ.
ಮಾಡೆಲ್ ಮಾನಸಿ ದೀಕ್ಷಿತ್ ಮೃತದೇಹ ಸೂಟ್ ಕೇಸ್ ನಲ್ಲಿ ತುಂಬಿಡಲಾಗಿತ್ತು. ಈಕೆಯನ್ನು ಸ್ನೇಹಿತ ಸೈಯದ್ ಎಂಬಾತ ಕೊಲೆ ಮಾಡಿದ್ದಾಗಿ ಪೊಲೀಸರು ಆತನನ್ನು ಬಂಧಿಸಿದ್ದರು.
ಇದೀಗ ಕೊಲೆ ಹಿಂದಿನ ಕಾರಣ ಬಯಲಾಗಿದ್ದು, ಮಾನಸಿ ಸೆಕ್ಸ್ ಗೆ ನಿರಾಕರಿಸಿದ್ದಕ್ಕೆ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ವಿಚಾರಣೆ ಸಂದರ್ಭ ಆರೋಪಿ ಈ ವಿಚಾರ ಬಾಯ್ಬಿಟ್ಟಿದ್ದು, ಆಕೆಗೆ ಲೈಂಗಿಕ ಸಂಬಂಧದ ಬೇಡಿಕೆಯಿಟ್ಟಿದ್ದೆ, ನಿರಾಕರಿಸಿದ್ದಕ್ಕೆ ಕೋಪಗೊಂಡು ಸ್ಟೂಲ್ ನಿಂದ ತಲೆಗೆ ಹೊಡೆದು ಕೊಲೆ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.