ಹೆಚ್ಚು ವೋಟ್ ಪಡೆದಿದ್ದು ಸರ್ದಾರ್ ವಲ್ಲಭಾಯಿ ಪಟೇಲ್, ಆದ್ರೆ ನೆಹರೂ ಹೇಗೆ ಪ್ರಧಾನಿಯಾದ್ರು

Krishnaveni K
ಗುರುವಾರ, 11 ಡಿಸೆಂಬರ್ 2025 (10:46 IST)
ನವದೆಹಲಿ: ಸ್ವಾತಂತ್ರ್ಯಾ ನಂತರ ಪ್ರಧಾನಿ ಯಾರಾಗಬೇಕು ಎಂದು ಮತದಾನವಾದಾಗ ಸರ್ದಾರ್ ವಲ್ಲಭಾಯಿ ಪಟೇಲ್ ಗೆ 12 ಮತಗಳು ಬಂದಿತ್ತು. ನೆಹರೂಗೆ ಕೇವಲ 2 ಮತ ಬಂದಿದ್ದು. ಆದರೆ ಕೊನೆಗೆ ಪ್ರಧಾನಿಯಾಗಿದ್ದು ನೆಹರೂ. ಇಲ್ಲಿಯೇ ಮತಗಳ್ಳತನ ಆರಂಭವಾಗಿತ್ತು ಎಂದು ಗೃಹಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಪ್ರಶ್ನೆ ಮಾಡಿದ್ದಾರೆ.

ವಿಪಕ್ಷ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ಮೇಲೆ ಮತಗಳ್ಳತನದ ಆರೋಪ ಮಾಡಿದ್ದರು. ಈ ಆರೋಪಗಳಿಗೆ ಉತ್ತರಿಸುತ್ತಿದ್ದ ಅಮಿತ್ ಶಾ ಮೊದಲು ಮತಗಳ್ಳತನ ಆರಂಭವಾಗಿದ್ದೇ ನೆಹರೂವಿನಿಂದ ಎಂದಿದ್ದಾರೆ.

ದೇಶದಲ್ಲಿ ಪ್ರಮುಖವಾಗಿ ಮೂರು ಮತದಾನ ನಡೆದಿತ್ತು. ಅದರಲ್ಲಿ ಮೊದಲನೆಯದ್ದು ನೆಹರೂ ಪ್ರಧಾನಿಯಾದಾಗ. ಸರ್ದಾರ್ ವಲ್ಲಭಾಯಿ ಪಟೇಲ್ ಗೆ 12 ವೋಟ್ ಬಂದಿತ್ತು. ನೆಹರೂಗೆ ಕೇವಲ 2 ಮತ ಬಂದಿತ್ತು. ಕೊನೆಗೆ ಪ್ರಧಾನಿಯಾಗಿದ್ದು ನೆಹರೂ!

ಎರಡನೆಯ ಬಾರಿಗೆ ಮತಗಳ್ಳತನವಾಗಿದ್ದು ಇಂದಿರಾ ಗಾಂಧಿಯವರಿಂದ. ತಮ್ಮ ಆಯ್ಕೆ ನ್ಯಾಯಸಮ್ಮತವಾಗಿ ನಡೆದಿಲ್ಲ ಎಂದು ತಿಳಿದು ತಮ್ಮ ಸ್ಥಾನಕ್ಕೆ ಕುತ್ತು ಬರಬಹುದು ಎಂದು ತಿಳಿದಾಗ ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿ ಹೇರಿ ಇಡೀ ದೇಶವನ್ನು ಅಮಾನತಿನಲ್ಲಿಟ್ಟರು.

ಮೂರನೆಯ ಬಾರಿ ಸೋನಿಯಾ ಗಾಂಧಿ ಪೌರತ್ವ ಪಡೆಯುವ ಮೊದಲೇ ಮತ ಚಲಾಯಿಸಿದಾಗಲೇ ಮತಗಳ್ಳತನ ನಡೆದಿತ್ತು ಎಂದು ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸದನದಲ್ಲೇ ನಿದ್ದೆ ಹೋದ ಡಿಕೆ ಶಿವಕುಮಾರ್: ರಾತ್ರಿಯೆಲ್ಲಾ ನಿದ್ರೆಯಿಲ್ವಾ ಎಂದು ಕಾಲೆಳದ ಆರ್ ಅಶೋಕ್

ಹೆಚ್ಚು ವೋಟ್ ಪಡೆದಿದ್ದು ಸರ್ದಾರ್ ವಲ್ಲಭಾಯಿ ಪಟೇಲ್, ಆದ್ರೆ ನೆಹರೂ ಹೇಗೆ ಪ್ರಧಾನಿಯಾದ್ರು

ಚುನಾವಣಾ ಆಯೋಗಕ್ಕೂ ಅಂಕುಶವಿರಬೇಕು ಎಂಬ ರಾಹುಲ್ ಗಾಂಧಿ ಅಭಿಪ್ರಾಯ ಒಪ್ಪುತ್ತೀರಾ

ನಾನೇನು ಮಾತನಾಡಬೇಕೆಂದು ನಾನು ನಿರ್ಧರಿಸುತ್ತೇನೆ: ರಾಹುಲ್ ಗಾಂಧಿ ಬೆವರಿಳಿಸಿದ ಅಮಿತ್ ಶಾ Video

ಸಿಎಂ ಬದಲಾವಣೆ ಬಗ್ಗೆ ಬೆಳಗಾವಿಯಲ್ಲೇ ನಡೆಯಿತು ಮಹತ್ವದ ವಿದ್ಯಮಾನ

ಮುಂದಿನ ಸುದ್ದಿ
Show comments