Select Your Language

Notifications

webdunia
webdunia
webdunia
webdunia

ಇನ್ನೇನು ರೈಲು ಬಂದು ಡಿಕ್ಕಿ ಹೊಡಿಬೇಕು ಎನ್ನುವಷ್ಟರಲ್ಲಿ ದೇವರ ರೂಪದಲ್ಲಿ ಬಂದ ವ್ಯಕ್ತಿ, Video

Tamilnadu Railway Caretaker
Photo Credit X
ತಮಿಳುನಾಡು: ತನ್ನ ಜೀವದ ಹಂಗನ್ನು ತೊರೆದು ಪ್ರಾಣಪಾಯದಲ್ಲಿದ್ದ ವ್ಯಕ್ತಿಯನ್ನು ಕಾಪಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

ಜುಲೈ 6, 2026 ರಂದು, ತಮಿಳುನಾಡಿನ ಮಯಿಲಾಡುತುರೈ ಜಿಲ್ಲೆಯ ಲೆವೆಲ್ ಕ್ರಾಸಿಂಗ್ ಒಂದರಲ್ಲಿ ಈ ಘಟನೆ ಸಂಭವಿಸಿದೆ. 

 30 ವರ್ಷದ ಸಂದೀಪ್ ಚಾಹರ್ ಅವರು ಸಂಜೆ 4:30 ಕ್ಕೆ ರೈಲು ಸಂಖ್ಯೆ 66020 ಬರುತ್ತಿದ್ದಾಗ ಹಳಿಗಳ ಮೇಲೆ ವ್ಯಕ್ತಿಯೊಬ್ಬರು ಬರುವುದನ್ನು ಗಮನಿಸಿದ್ದಾರೆ. 

ಅವರು ತಕ್ಷಣ 10 ಮೀಟರ್ ಓಡಿ, ಆ ವ್ಯಕ್ತಿಯ ತೋಳನ್ನು ಹಿಡಿದು ಸುರಕ್ಷಿತವಾಗಿ ನೆಲದ ಮೇಲೆ ಎಳೆದರು, ಈ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ

ಮೂರು ದಿನಗಳ ನಂತರ, ಜುಲೈ 9 ರಂದು, ತಿರುಚಿರಾಪಳ್ಳಿಯಲ್ಲಿ ನಡೆದ ಸಮಾರಂಭದಲ್ಲಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ (DRM) ಶ್ರೀ ಬಾಲಕ್ ರಾಮ್ ನೇಗಿ ಅವರು ಅವರ ಧೈರ್ಯವನ್ನು ಶ್ಲಾಘಿಸಿ 'ಸುರಕ್ಷತಾ ಪ್ರಶಸ್ತಿ' ನೀಡಿ ಗೌರವಿಸಿದರು. 

ಜೈಪುರ ಮೂಲದ, ದಕ್ಷಿಣ ರೈಲ್ವೆಯಲ್ಲಿ ಏಳು ವರ್ಷಗಳ ಅನುಭವ ಹೊಂದಿರುವ ಚಾಹರ್ ಸರಳವಾಗಿ, "ನಾನು ನನ್ನ ಕರ್ತವ್ಯವನ್ನು ಮಾಡುತ್ತಿದ್ದೆ. ಒಬ್ಬರ ಪ್ರಾಣ ಉಳಿಸಿದ್ದಕ್ಕೆ ನನಗೆ ಸಂತೋಷವಿದೆ" ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ವೋಟ್ ಬ್ಯಾಂಕ್ ಗಾಗಿ ಅಕ್ರಮ ಬಾಂಗ್ಲಾ ನಿವಾಸಿಗರಿಗೆಲ್ಲಾ ಶಾಶ್ವತ ನಿವಾಸಿಗರ ಸರ್ಟಿಫಿಕೇಟ್ ನೀಡಲಾಗ್ತಿದೆ: ಶೋಭಾ ಕರಂದ್ಲಾಜೆ