Select Your Language

Notifications

webdunia
webdunia
webdunia
webdunia

ವಯನಾಡಿನಲ್ಲಿ ಸಂತ್ರಸ್ತರನ್ನು ನೋಡಿ ರಾಹುಲ್ ಗಾಂಧಿಗೆ ತಂದೆಯ ಸಾವಿನ ನೆನಪು: ಇಂದೂ ವಯನಾಡಿನಲ್ಲೇ ಅಕ್ಕ-ತಮ್ಮ ಮೊಕ್ಕಾಂ

Rahul Gandhi

Krishnaveni K

ವಯನಾಡು , ಶುಕ್ರವಾರ, 2 ಆಗಸ್ಟ್ 2024 (12:30 IST)
ವಯನಾಡು:  ತಾವು ಪ್ರತಿನಿಧಿಸುವ ವಯನಾಡಿನಲ್ಲಿ ಗುಡ್ಡ ಕುಸಿತದಿಂದಾಗಿ ಭಾರೀ ಸಾವು-ನೋವು ಸಂಭವಿಸಿದ್ದು ನಿನ್ನೆಯಿಂದ ರಾಹುಲ್ ಗಾಂಧಿ ಮತ್ತು ಸಹೋದರಿ ಪ್ರಿಯಾಂಕ ವಾದ್ರಾ ಇಲ್ಲಿಯೇ ಬಿಡುಬಿಟ್ಟಿದ್ದಾರೆ. ಇಲ್ಲಿನ ಸಂತ್ರಸ್ತರನ್ನು ಭೇಟಿಯಾದ ಬಳಿಕ ನಮಗೆ ನಮ್ಮ ತಂದೆಯ ಸಾವಿನ ನೆನಪಾಯಿತು ಎಂದು ರಾಹುಲ್ ಹೇಳಿಕೊಂಡಿದ್ದಾರೆ.

ನಿನ್ನೆ ಬೆಳಿಗ್ಗೆಯಿಂದ ರಾಹುಲ್ ತಮ್ಮ ಸಹೋದರಿ ಪ್ರಿಯಾಂಕ ಜೊತೆ ವಯನಾಡಿನಲ್ಲೇ ಇದ್ದಾರೆ. ನಿನ್ನೆ ಗುಡ್ಡಕುಸಿತವಾದ ಜಾಗ, ಸಂತ್ರಸ್ತರ ಕೇಂದ್ರಗಳಿಗೆ ಭೇಟಿ ನೀಡಿದ ರಾಹುಲ್-ಪ್ರಿಯಾಂಕ ಜೋಡಿ ಪರಿಹಾರ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು. ಅಲ್ಲದೆ, ಸಂತ್ರಸ್ತರಿಗೆ ಸಾಂತ್ವನ ಹೇಳಿದ್ದಾರೆ.

ಸಂತ್ರಸ್ತರನ್ನು ಬಿಗಿದಪ್ಪಿ ಸಂತೈಸಿದ ರಾಹುಲ್ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಇವರನ್ನು ನೋಡುತ್ತಿದ್ದರೆ ನಮ್ಮ ತಂದೆಯ ಸಾವು ನೆನಪಾಯಿತು. ಇದು ಅದಕ್ಕಿಂತಲೂ ಘೋರ ದುಃಖದ ಸಂದರ್ಭ. ಇಲ್ಲಿರುವವರು ಇಡೀ ಕುಟುಂಬದವರನ್ನೇ ಕಳೆದುಕೊಂಡಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ.

ಇಂದೂ ಕೂಡಾ ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸಿರುವ ರಾಹುಲ್ ಪರಿಹಾರ ಕಾರ್ಯಕ್ಕೆ ನೆರವಾಗಲು ಸಲಹೆ ಸೂಚನೆ ನೀಡಿದ್ದಾರೆ. ಬಳಿಕ ಮುಂಡಕೈ ಅರಣ್ಯಾಧಿಕಾರಿಗಳ ಕಚೇರಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಅಪರಾಹ್ನವೂ ಗ್ರಾಮ ಪಂಚಾಯತಿ ಅಧಿಕಾರಿಗಳೊಂದಿಗೆ ರಾಹುಲ್ ಸಭೆ ನಡೆಸಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಂಗಳೂರು-ಬೆಂಗಳೂರು ರೈಲ್ವೇ ಪ್ರಯಾಣಿಕರಿಗೆ ಸಿಹಿ ಸುದ್ದಿ: ಹೊಸ ರೈಲಿನ ವೇಳಾಪಟ್ಟಿಇಲ್ಲಿದೆ