Select Your Language

Notifications

webdunia
webdunia
webdunia
webdunia

ಒಂದು ತಿಂಗಳ ಕಾಲ ಮಾಧ್ಯಮಗಳಿಗೆ ಸಂದರ್ಶನ ನೀಡದಂತೆ ಕಾಂಗ್ರೆಸ್ ನಾಯಕರಿಗೆ ಆದೇಶಿಸಿದ ನಿಜ ಉದ್ದೇಶವೇನು ಗೊತ್ತಾ?

ಒಂದು ತಿಂಗಳ ಕಾಲ ಮಾಧ್ಯಮಗಳಿಗೆ ಸಂದರ್ಶನ ನೀಡದಂತೆ ಕಾಂಗ್ರೆಸ್ ನಾಯಕರಿಗೆ ಆದೇಶಿಸಿದ ನಿಜ ಉದ್ದೇಶವೇನು ಗೊತ್ತಾ?
ನವದೆಹಲಿ , ಶುಕ್ರವಾರ, 31 ಮೇ 2019 (09:13 IST)
ನವದೆಹಲಿ: ರಾಹುಲ್ ಗಾಂಧಿ ಪದತ್ಯಾಗ ಅಥವಾ ಕಾಂಗ್ರೆಸ್ ಪಕ್ಷದ ಸದ್ಯದ ಪರಿಸ್ಥಿತಿಗಳ ಕುರಿತು ಯಾವುದೇ ನಾಯಕರು ಟಿವಿ ಅಥವಾ ಇನ್ನಿತರ ಮಾಧ್ಯಮ ಚರ್ಚೆಗಳಲ್ಲಿ ಮಾತನಾಡಬಾರದು ಎಂದು ಕಾಂಗ್ರೆಸ್ ನಾಯಕರಿಗೆ ಪಕ್ಷ ಖಡಕ್ ಆಗಿ ಸೂಚನೆ ನೀಡಿದೆ.


ಆದರೆ ಇದರ ಹಿಂದಿನ ಉದ್ದೇಶವೇನು ಗೊತ್ತಾ? ಸದ್ಯಕ್ಕೆ ರಾಹುಲ್ ಗಾಂಧಿ ತಮ್ಮ ಪಕ್ಷದ ಹಿರಿಯ ನಾಯಕರಿಗೆ ಒಂದು ತಿಂಗಳ ಕಾಲಾವಕಾಶ ನೀಡಿದ್ದು, ಅಷ್ಟರಲ್ಲಿ ಹೊಸ ಅಧ್ಯಕ್ಷನನ್ನು ಕಂಡುಕೊಳ್ಳಲು ಸೂಚಿಸಿದ್ದಾರೆ ಎನ್ನಲಾಗಿದೆ.

ಆದರೆ ಇದ್ಯಾವುದೇ ವಿಚಾರಗಳ ಬಗ್ಗೆ ಕಾಂಗ್ರೆಸ್ ನಾಯಕರು ತುಟಿ ಪಿಟಕ್ ಎನ್ನುತ್ತಿಲ್ಲ. ಟಿವಿ ಮಾಧ್ಯಮಗಳಲ್ಲಿ ನಡೆಯುವ ಚರ್ಚೆಗಳಲ್ಲಿ ಈ ಕುರಿತು ಯಾವುದೇ ನಾಯಕರು ಮಾತನಾಡುವಾಗ ಬಾಯ್ತಪ್ಪಿ ಏನೇ ಹೇಳಿಕೆ ನೀಡಿದರೂ ಅದು ಪಕ್ಷಕ್ಕೆ ಮತ್ತಷ್ಟು ಹಾನಿ ಉಂಟು ಮಾಡಬಹುದು ಎಂಬ ಉದ್ದೇಶಕ್ಕೆ ಕಾಂಗ್ರೆಸ್ ನಾಯಕರಿಗೆ ಈ ಗೌಪ್ಯತೆ ಕಾಪಾಡಿಕೊಳ್ಳಲು ಸೂಚನೆ ನೀಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಶುವೈದ್ಯ ಮಾಡಿದ ಈ ಕೆಲಸದಿಂದ ಸಿಂಧ್ ಪ್ರಾಂತ್ಯದಲ್ಲಿ ಭಾರಿ ಪ್ರತಿಭಟನೆ