Select Your Language

Notifications

webdunia
webdunia
webdunia
webdunia

ಕೊನೆಯ ಕ್ಷಣದಲ್ಲಿ ಪ್ರಧಾನಿ ಮೋದಿ ಪ್ರಮಾಣವಚನಕ್ಕೆ ಬರೋಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದೇಕೆ?

ಕೊನೆಯ ಕ್ಷಣದಲ್ಲಿ ಪ್ರಧಾನಿ ಮೋದಿ ಪ್ರಮಾಣವಚನಕ್ಕೆ ಬರೋಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದೇಕೆ?
ನವದೆಹಲಿ , ಗುರುವಾರ, 30 ಮೇ 2019 (09:23 IST)
ನವದೆಹಲಿ: ರಾಜಕೀಯ ವೈರುಧ್ಯಗಳನ್ನೂ ಮರೆತು ಪ್ರಧಾನಿ ಮೋದಿ ಪ್ರಮಾಣ ವಚನ ಸಮಾರಂಭಕ್ಕೆ ಹಾಜರಾಗಲು ಹೊರಟಿದ್ದ ಪ.ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೊನೆಯ ಕ್ಷಣದಲ್ಲಿ ನಿರ್ಧಾರ ಬದಲಿಸಿದ್ದಾರೆ.


ಅಷ್ಟಕ್ಕೂ ದೀದಿಯ ಈ ಬದಲಾದ ನಿರ್ಧಾರಕ್ಕೆ ಕಾರಣವೇನು ಗೊತ್ತಾ? ಈ ಕಾರ್ಯಕ್ರಮಕ್ಕೆ ಬಿಜೆಪಿ ಪ.ಬಂಗಾಲದಲ್ಲಿ ನಡೆದ ಹಿಂಸಾಚಾರದಲ್ಲಿ ಹತ್ಯೆಗೀಡಾದ ತನ್ನ ಕಾರ್ಯಕರ್ತರ ಕುಟುಂಬಗಳಿಗೆ ಆಹ್ವಾನ ನೀಡಿದ್ದು, ದೀದಿ ಸಿಟ್ಟಿಗೆ ಕಾರಣವಾಗಿದೆ.

‘ಪ್ರಮಾಣ ವಚನ ಎಂಬುದು ಪ್ರಜಾಪ್ರಭುತ್ವದ ಹಬ್ಬ. ಇದು ಯಾವುದೇ ಪಕ್ಷಕ್ಕೆ ಮಾತ್ರ ಸೀಮಿತವಾದುದಲ್ಲ. ಹೀಗಿರುವಾಗ ತನ್ನ ಕಾರ್ಯಕರ್ತರ ಕುಟುಂಬವನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸುವುದು ಬಿಜೆಪಿಗೆ ಅಗತ್ಯವಿರಲಿಲ್ಲ’ ಎಂಬುದು ಮಮತಾ ವಾದ. ಅದೇನೇ ಇದ್ದರೂ ರಾಜಕೀಯ ವೈಷಮ್ಯ ಮರೆತು ದೀದಿ ಪ್ರಮಾಣ ವಚನಕ್ಕೆ ಹಾಜರಾಗುತ್ತಾರೆಂಬ ನಿರೀಕ್ಷೆ ಸುಳ್ಳಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯಾಗದಿದ್ದರೆ ಮುಖಕ್ಕೆ ಆ್ಯಸಿಡ್ ಎರಚುವೆ ಎಂದ ಪಾಗಲ್ ಪ್ರೇಮಿ ಅರೆಸ್ಟ್