Select Your Language

Notifications

webdunia
webdunia
webdunia
webdunia

ಪ್ರಧಾನಿ ನರೇಂದ್ರಮೋದಿ ಮೆಚ್ಚುಗೆಗೆ ಪಾತ್ರರಾದ ರತ್ನಪ್ರಭಾ ಕಾರ್ಯ

ಪ್ರಧಾನಿ ನರೇಂದ್ರಮೋದಿ ಮೆಚ್ಚುಗೆಗೆ ಪಾತ್ರರಾದ ರತ್ನಪ್ರಭಾ ಕಾರ್ಯ
ನವದೆಹಲಿ , ಮಂಗಳವಾರ, 9 ಜನವರಿ 2018 (18:58 IST)

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ ರತ್ನಪ್ರಭಾ ಅವರ ಕಾರ್ಯಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರತ್ನಪ್ರಭಾ ಅವರು 27 ವರ್ಷಗಳ ಹಿಂದೆ ರಾಯಚೂರು ಜಿಲ್ಲಾಧಿಕಾರಿಯಾಗಿದ್ದಾಗ ಕಾರಿನಲ್ಲಿ ಹೋಗುವ ವೇಳೆ ಕುರಿ ಕಾಯುತ್ತಿದ್ದ ಬಾಲಕ ನರಸಪ್ಪನನ್ನು ಶಾಲೆಗೆ ಸೇರಿಸಿದ್ದರು. ಆ ಬಾಲಕ ಈಗ ವಿದ್ಯಾಭ್ಯಾಸ ಮುಗಿಸಿ ಕರ್ನಾಟಕದಲ್ಲಿ ಪೊಲೀಸ್ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದಾನೆ ಎಂಬ ಮಾಹಿತಿಯನ್ನು ರತ್ನಪ್ರಭಾ ಅವರು ಐದು ದಿನಗಳ ಹಿಂದೆ ಟ್ವೀಟರನಲ್ಲಿ ಹಂಚಿಕೊಂಡಿದ್ದರು.

ರತ್ನಪ್ರಭಾ ಅವರು ಟ್ವಿಟ್ ಮಾಹಿತಿ ನರೇಂದ್ರ ಮೋದಿ ಅವರಿಗೂ ತಲುಪಿತ್ತು, ಈ ಮಾಹಿತಿಯನ್ನು ಪ್ರಸ್ತಾಪಿಸಿದ ಮೋದಿ ಅವರು  ರತ್ನಪ್ರಭಾ ಅವರು ಇತರೆ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

ಅಮೆಜಾನ್‌ನಿಂದ ಗ್ರಾಹಕರಿಗೆ ಬಂಫರ್ ಆಫರ್