Select Your Language

Notifications

webdunia
webdunia
webdunia
webdunia

ಮಹಾದಾಯಿ ಸಮಸ್ಯೆ ಇತ‌್ಯರ್ಥವಾದರೆ ಸಾಕು– ಎಂ.ಬಿ.ಪಾಟೀಲ

ಮಹಾದಾಯಿ ಸಮಸ್ಯೆ ಇತ‌್ಯರ್ಥವಾದರೆ ಸಾಕು– ಎಂ.ಬಿ.ಪಾಟೀಲ
ವಿಜಯಪುರ , ಶನಿವಾರ, 6 ಜನವರಿ 2018 (15:50 IST)
ಪ್ರಧಾನ ಮಂತ್ರಿ ನರೇಂದ್ರ ಮೋದಿ ಗೋವಾ ಮುಖ್ಯಮಂತ್ರಿ ಹಾಗೂ ಯಡಿಯೂರಪ್ಪ ಸೇರಿದಂತೆ ಯಾರೊಂದಿಗಾದರೂ ಸಭೆ ಮಾಡಲಿ. ಮಹಾದಾಯಿ ಸಮಸ್ಯೆ ಇತ್ಯರ್ಥವಾದರೆ ಸಾಕು ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್‌ ಹೇಳಿದ್ದಾರೆ.
 
ವಿಜಯಪುರದಲ್ಲಿ ಮಾತನಾಡಿದ ಅವರು, ಮಹಾದಾಯಿ ವಿವಾದದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಯಾರ ಜೊತೆ ಬೇಕಾದರೂ ಸಭೆ ನಡೆಸಲಿ. ಆದರೆ, ಮಹಾದಾಯಿ ಸಮಸ್ಯೆ ಬಗೆಹರಿಸಲಿ ಎಂದಿದ್ದಾರೆ.
 
ರಾಜ್ಯವನ್ನು ಮಾತುಕತೆಗೆ ಕರೆದರೆ ಹೋಗುತ್ತೇವೆ. ಆದರೆ, ರಾಜ್ಯದ ಪಾಲಿನ 7.56 ಟಿಎಂಸಿ ನೀರು ಬಿಡುಗಡೆಗೆ ಒಪ್ಪದಿದ್ದರೆ ಮಾತುಕತೆಯಲ್ಲಿ ಭಾಗವಹಿಸುವ ಪ್ರಶ್ನೆಯೇ ಇಲ್ಲ‌ ಎಂದಿರುವ ಅವರು, ಜನವರಿ 16ರೊಳಗೆ ನ್ಯಾಯಾಧೀಕರಣಕ್ಕೆ ರಾಜ್ಯದ ನಿಲುವಿನ ದಾಖಲೆಗಳನ್ನು ಸಲ್ಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿರಾ ಕ್ಯಾಂಟಿನ್‌ ಮೇಲಾಧಿಕಾರಿಯಿಂದ ಮಹಿಳೆಗೆ ಲೈಂಗಿಕ ಕಿರುಕುಳ