Webdunia - Bharat's app for daily news and videos

Install App

ಮುಂಬೈ ದಾಳಿ ಸಂದರ್ಭ ಭಾರತದಲ್ಲಿದ್ದ ಪಾಕ್ ಸಚಿವರಿಗೆ ಪ್ರಣಬ್ ಮುಖರ್ಜಿ ಹೇಳಿದ್ದೇನು?

Webdunia
ಭಾನುವಾರ, 15 ಅಕ್ಟೋಬರ್ 2017 (08:32 IST)
ನವದೆಹಲಿ: 2008 ರಲ್ಲಿ ಮುಂಬೈ ಮೇಲೆ ಪಾಕ್ ಮೂಲದ ಉಗ್ರರು ದಾಳಿ ನಡೆಸುವಾಗ ಭಾರತದಲ್ಲಿದ್ದ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಶಿಗೆ ತಕ್ಷಣವೇ ಭಾರತ ಬಿಟ್ಟು ತೆರಳುವಂತೆ ಆದೇಶಿಸಿದ್ದರಂತೆ.

 
ಪ್ರಣಬ್ ಮೊನ್ನೆಯಷ್ಟೇ ಲೋಕಾರ್ಪಣೆಗೊಂಡ ತಮ್ಮ ಪುಸ್ತಕ ‘ದಿ ಕೊಯಿಲೇಷನ್ ಇಯರ್ಸ್, 1996-2012’ ರಲ್ಲಿ ಈ ವಿಷಯ ಬಹಿರಂಗಪಡಿಸಿದ್ದಾರೆ. ಮುಂಬೈ ಮೇಲೆ ದಾಳಿ ನಡೆದ ಮರುದಿವಸ ಪಾಕ್ ಸಚಿವ ಶಾ ಖರೇಶಿ ಮುಂಬೈಯಲ್ಲಿ ಪತ್ರಿಕಾಗೋಷ್ಟಿ ನಡೆಸಲುದ್ದೇಶಿಸಿದ್ದರಂತೆ.

ಆದರೆ ಅದನ್ನು ತಮ್ಮ ಪರಿಚಯದ ಪತ್ರಕರ್ತರ ಮೂಲಕ ತಡೆದ ಅಂದಿನ ವಿದೇಶಾಂಗ ಸಚಿವ ಪ್ರಣಬ್, ಖುರೇಶಿ ಜತೆಗೆ ಮಾತನಾಡಿ ತಕ್ಷಣವೇ ಪಾಕ್ ಗೆ ತೆರಳಲು ಆದೇಶಿಸಿದ್ದರಂತೆ. ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡ ಹಿನ್ನಲೆಯಲ್ಲಿ ಪ್ರಣಬ್ ಹೀಗೆ ಹೇಳಿದ್ದರಂತೆ.

ಇದಕ್ಕಾಗಿ ಪಾಕ್ ಸಚಿವರಿಗೆ ತಮ್ಮದೇ ಇಲಾಖೆಯ ವಿಶೇಷ ವಿಮಾನವೊಂದನ್ನು ಸಿದ್ಧಗೊಳಿಸಿದ್ದರಂತೆ. ಆದರೆ ಅದನ್ನು ನಯವಾಗಿ ನಿರಾಕರಿಸಿದ ಪಾಕ್ ಸಚಿವ ತಮ್ಮದೇ ವಿಮಾನದಲ್ಲಿ ತವರಿಗೆ ಮರಳಿದ್ದರಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments