Webdunia - Bharat's app for daily news and videos

Install App

ಭಾರತವನ್ನು ಕಡೆಗಣಿಸಿದ್ದಕ್ಕೆ ಮಾಲ್ಡೀವ್ಸ್ ಗೆ ಠಕ್ಕರ್ ಕೊಟ್ಟ ಮೋದಿ: ಲಕ್ಷದ್ವೀಪಕ್ಕೆ ಪ್ರವಾಸಿಗರ ದಂಡು

Krishnaveni K
ಭಾನುವಾರ, 7 ಜನವರಿ 2024 (11:12 IST)
ನವದೆಹಲಿ: ಭಾರತವನ್ನು ಕಡೆಗಣಿಸಿ ಚೀನಾ ಬಾಲ ಹಿಡಿದಿದ್ದ ಮಾಲ್ಡೀವ್ಸ್ ಗೆ ಭಾರತದ  ಪ್ರಧಾನಿ ಮೋದಿ ಸೂಕ್ತವಾಗಿ ಠಕ್ಕರ್ ಕೊಟ್ಟಿದ್ದಾರೆ. ಇದರ ಪರಿಣಾಮ ಭಾರತದಿಂದ ಮಾಲ್ಡೀವ್ಸ್ ಗೆ ತೆರಳಬೇಕಿದ್ದ ಎಷ್ಟೋ ಜನರು ಪ್ರವಾಸ ಕ್ಯಾನ್ಸಲ್ ಮಾಡಿ ಲಕ್ಷದ್ವೀಪದತ್ತ ಮುಖ ಮಾಡಿದ್ದಾರೆ.

ಮಾಲ್ಡೀವ್ಸ್ ಇತ್ತೀಚೆಗೆ ಭಾರತೀಯ ಸೈನಿಕರನ್ನು ತನ್ನ ದೇಶದಿಂದ ಹೊರಹೋಗುವಂತೆ ಸೂಚಿಸಿತ್ತು. ಇದರ ಹಿಂದೆ ಚೀನಾ ಕುಮ್ಮಕ್ಕು ಇದೆಯೆಂಬ ಗುಮಾನಿಯಿತ್ತು. ಇದರ ಜೊತೆಗೆ ಚೀನಾ ಜೊತೆಗೆ ದ್ವೀಪ ರಾಷ್ಟ್ರದ ಸಖ್ಯ ಜೋರಾಗಿಯೇ ಇತ್ತು.

ಹೀಗಾಗಿ ಮಾಲ್ಡೀವ್ಸ್ ಸೊಕ್ಕು ಮುರಿಯಲು ಪ್ರಧಾನಿ ಮೋದಿ ಇತ್ತೀಚೆಗೆ ಲಕ್ಷದ್ವೀಪಕ್ಕೆ ತೆರಳಿ ಅಲ್ಲಿನ ಪ್ರಕೃತಿ ಸೌಂದರ್ಯದ ಬಗ್ಗೆ, ಕಡಲ ತೀರದಲ್ಲಿ ಪ್ರವಾಸ ಮಾಡಲು ಇರುವ ಅವಕಾಶದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದರು. ಇದರ ಬೆನ್ನಲ್ಲೇ ಹಲವಾರು ಮಂದಿ ಮಾಲ್ಡೀವ್ಸ್ ಗೆ ತೆರಳುವ ಯೋಜನೆ ಬಿಟ್ಟು ಲಕ್ಷದ್ವೀಪದತ್ತ ಮುಖ ಮಾಡಿದ್ದಾರೆ.

ಭಾರತೀಯರ ಈ ಒಂದು ನಡೆಯಿಂದ ಪ್ರವಾಸೋಧ್ಯಮವನ್ನೇ ಆದಾಯವಾಗಿ ನಂಬಿಕೊಂಡಿರುವ ಆ ರಾಷ್ಟ್ರದ ಆದಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಹಲವಾರು ಮಂದಿ ಈಗಾಗಲೇ ಮಾಲ್ಡೀವ್ಸ್ ಪ್ರವಾಸ ಕ್ಯಾನ್ಸಲ್ ಮಾಡಿ ಲಕ್ಷದ್ವೀಪಕ್ಕೆ ತೆರಳಲು ಯೋಜನೆ ಹಾಕಿಕೊಂಡಿರುವುದಾಗಿ ವರದಿಯಾಗಿದೆ. ಗೂಗಲ್ ನಲ್ಲೂ ಅತೀ ಹೆಚ್ಚು ಮಂದಿ ಲಕ್ಷದ್ವೀಪದ ಬಗ್ಗೆ ಸರ್ಚ್ ಮಾಡಿ ತಿಳಿದುಕೊಳ್ಳುತ್ತಿದ್ದಾರೆ. ಈ ಮೂಲಕ ಮೋದಿಯ ಒಂದು ಫೋಟೋ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದಂತಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜಸ್ಥಾನ: ಇನ್ನೇನು ವಧುವಿಗೆ ತಾಳಿ ಕಟ್ಬೇಕು,ಇಡಿ ದಾಳಿ, ವರ ಮದುವೆ ಬಿಟ್ಟು ಪರಾರಿ

ಡಾಬರ್ ಚ್ಯವನಪ್ರಾಶ್ ಜಾಹೀರಾತು ನೀಡದಂತೆ ಹೈಕೋರ್ಟ್ ಪತಂಜಲಿಗೆ ತಡೆಯಾಜ್ಟೆ: ರಾಮ್‌ದೇವ್‌ಗೆ ಹಿನ್ನಡೆ

ಮಹಾರಾಷ್ಟ್ರದಲ್ಲಿ 767 ರೈತರ ಸಾವು: ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ರಾಹುಲ್ ಗಾಂ ಧಿ

ಹಠಾತ್ ಸಾವಿಗೂ ಕೋವಿಡ್ ಲಸಿಕೆಗೂ ಯಾವುದೇ ಸಂಬಂಧವಿಲ್ಲ: ಸೀರಮ್ ಇನ್‌ಸ್ಟಿಟ್ಯೂಟ್ ಸ್ಪಷ್ಟನೆ

ಕೊವಿಡ್ ವ್ಯಾಕ್ಸಿನ್ ಬಗ್ಗೆ ಸಿಎಂ ಹೇಳಿಕೆಗೇ ಸೆಡ್ಡು ಹೊಡೆದಂತಿದೆ ಆರೋಗ್ಯ ಸಚಿವರ ಹೇಳಿಕೆ

ಮುಂದಿನ ಸುದ್ದಿ
Show comments