Publish Date: Fri, 04 Jul 2025 (17:39 IST)
Updated Date: Fri, 04 Jul 2025 (17:41 IST)
ತಮಿಳುನಾಡು: ತಮಿಳಗ ವೆಟ್ರಿ ಕಳಗಂನ ಸಂಸ್ಥಾಪಕ ಮತ್ತು ಅಧ್ಯಕ್ಷ, ನಟ ಕಮ್ ರಾಜಕಾರಣಿ ವಿಜಯ್ ಅವರನ್ನು ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಗೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಪಕ್ಷ ಘೋಷಿಸಿದೆ. ರಾಜ್ಯ ಚುನಾವಣೆಗಳು 2026ರ ಏಪ್ರಿಲ್/ಮೇ ತಿಂಗಳಲ್ಲಿ ನಡೆಯುವ ನಿರೀಕ್ಷೆಯಿದೆ.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು "ಸೈದ್ಧಾಂತಿಕ ಶತ್ರು ಮತ್ತು ಪ್ರತ್ಯೇಕತಾವಾದಿಗಳೊಂದಿಗೆ ಪ್ರತ್ಯಕ್ಷ ಅಥವಾ ಪರೋಕ್ಷ ಮೈತ್ರಿ ಇಲ್ಲ. ಬಿಜೆಪಿ ಜನರನ್ನು ಧರ್ಮದ ಆಧಾರದ ಮೇಲೆ ವಿಭಜಿಸುತ್ತದೆ ಮತ್ತು ರಾಜಕೀಯ ಲಾಭವನ್ನು ಅನುಭವಿಸಲು ಜನರ ನಡುವೆ ಒಡಕು ಮೂಡಿಸುತ್ತದೆ. ಅವರ ಇಂತಹ ವಿಷಕಾರಿ ಪ್ರಯತ್ನಗಳು ತಮಿಳುನಾಡಿನಲ್ಲಿ ಎಲ್ಲಿಯೂ ಕೆಲಸ ಮಾಡಲ್ಲ ಎಂದು ಗುಡುಗಿದರು.
ಈ ಮೂಲಕ ಇಂದು ನಡೆದ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಹತ್ವದ ನಿರ್ಧಾರವನ್ನು ವಿಜಯ್ ಅವರು ಘೋಷಿಸಿದರು.