Select Your Language

Notifications

webdunia
webdunia
webdunia
webdunia

ನಿರ್ಭಯಾ ಅಪರಾಧಿ ಹೇಳುತ್ತಿರುವುದೆಲ್ಲವೂ ಸುಳ್ಳಿನ ಕಂತೆ!

ನಿರ್ಭಯಾ ಅಪರಾಧಿ ಹೇಳುತ್ತಿರುವುದೆಲ್ಲವೂ ಸುಳ್ಳಿನ ಕಂತೆ!
ನವದೆಹಲಿ , ಭಾನುವಾರ, 23 ಫೆಬ್ರವರಿ 2020 (09:10 IST)
ನವದೆಹಲಿ: ಇತ್ತೀಚೆಗಷ್ಟೇ ಗಲ್ಲು ಶಿಕ್ಷೆಗೆ ಗುರಿಯಾಗಿರುವ ನಿರ್ಭಯಾ ಗ್ಯಾಂಗ್ ರೇಪಿಸ್ಟ್ ಗಳ ಪೈಕಿ ಒಬ್ಬಾತ ವಿನಯ್ ಶರ್ಮಾ ಜೈಲಿನ ಗೋಡೆಗೆ ತಲೆ ಚಚ್ಚಿಕೊಂಡು ಗಾಯಗೊಂಡಿದ್ದಾನೆ. ಆತ ಈಗ ಮಾನಸಿಕವಾಗಿ ಅಸ್ವಸ್ಥನಾಗಿದ್ದಾನೆ ಎಂಬಿತ್ಯಾದಿ ಕತೆಗಳೆಲ್ಲವೂ ಬರೀ ಸುಳ್ಳು ಎಂದು ತಿಹಾರ್ ಜೈಲು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.


ವಿನಯ್ ಪರ ವಕೀಲರು ದೆಹಲಿಯ ಸ್ಥಳೀಯ ಕೋರ್ಟ್ ಗೆ ತನ್ನ ಕಕ್ಷಿದಾರ ಸ್ಕೀಝೋಫ್ರೀನಿಯಾ ಮಾನಸಿಕ ರೋಗದಿಂದ ಬಳಲುತ್ತಿದ್ದಾನೆ. ಆತನ ಮಾನಸಿಕ ಸ್ಥಿತಿ ಸರಿಯಿಲ್ಲ ಎಂದೆಲ್ಲಾ ವಾದ ಮಂಡಿಸಿದ್ದರು. ಈ ಸಂಬಂಧ ಕೋರ್ಟ್ ತಿಹಾರ್ ಜೈಲು ಅಧಿಕಾರಿಗಳಿಗೆ ವಿವರಣೆ ಕೇಳಿ ನೋಟಿಸ್ ನೀಡಿತ್ತು.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಜೈಲು ಅಧಿಕಾರಿಗಳು ಆತ ಹೇಳಿದ್ದೆಲ್ಲವೂ ಸುಳ್ಳಿನ ಕಂತೆ. ಆತ ಮಾನಸಿಕವಾಗಿ ಆರೋಗ್ಯವಾಗಿಯೇ ಇದ್ದಾನೆ. ಇದೆಲ್ಲಾ ಗಲ್ಲು ತಪ್ಪಿಸಿಕೊಳ್ಳಲು ಮಾಡುತ್ತಿರುವ ನಾಟಕ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಏರ್ ಲೈನ್ಸ್ ನಲ್ಲಿ ಪಿಯುಸಿ, ಡಿಪ್ಲೋಮಾ ಓದಿದವರಿಗೆ ಉದ್ಯೋಗಾವಕಾಶ