Webdunia - Bharat's app for daily news and videos

Install App

ಶ್ರೀರಾಮ ಮಾಂಸಾಹಾರಿ: ಎನ್ ಸಿಪಿ ನಾಯಕ ಜಿತೇಂದ್ರ ವಿವಾದಾತ್ಮಕ ಹೇಳಿಕೆ

Webdunia
ಗುರುವಾರ, 4 ಜನವರಿ 2024 (11:00 IST)
ಬೆಂಗಳೂರು: ಅಯೋಧ‍್ಯೆ ರಾಮಮಂದಿರ ಲೋಕಾರ್ಪಣೆಗೆ ಕೆಲವೇ ದಿನಗಳು ಬಾಕಿಯಿರುವಾಗ ಮಹಾರಾಷ್ಟ್ರದ ಎನ್ ಸಿಪಿ ಪಕ್ಷದ ನಾಯಕ ಜಿತೇಂದ್ರ ಅಹ್ವಾದ್ ಪ್ರಭು ಶ್ರೀರಾಮಚಂದ್ರನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಶ್ರೀರಾಮಚಂದ್ರ ಮಾಂಸಾಹಾರಿ. ಇಲ್ಲದೇ ಹೋಗಿದ್ದರೆ 14 ವರ್ಷ ಆತ ಹೇಗೆ ಕಾಡಿನಲ್ಲಿ ಜೀವನ ಮಾಡುತ್ತಿದ್ದ ಎಂದು ಜಿತೇಂದ್ರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

‘ನಾವು ಇತಿಹಾಸವನ್ನು ಸರಿಯಾಗಿ ಓದುವುದೇ ಇಲ್ಲ ಮತ್ತು ರಾಜಕೀಯಕ್ಕಾಗಿ ಎಲ್ಲಾ ಮರೆತುಬಿಡುತ್ತೇವೆ. ರಾಮ ನಮ್ಮವನು. ನಮ್ಮಂತೆ ಬಹುಜನ. ಅವನು ಆಹಾರಕ್ಕಾಗಿ ಬೇಟೆಯಾಡುತ್ತಿದ್ದ. ರಾಮ ಯಾವತ್ತೂ ಸಸ್ಯಾಹಾರಿಯಾಗಿರಲಿಲ್ಲ. ಆತ ಮಾಂಸಾಹಾರಿ. ಇಲ್ಲದೇ ಹೋದರೆ ಸಸ್ಯಾಹಾರಿಯಾಗಿದ್ದುಕೊಂಡು ಒಬ್ಬ ವ್ಯಕ್ತಿ ಕಾಡಿನಲ್ಲಿ 14 ವರ್ಷ ಹೇಗೆ ಜೀವನ ಮಾಡಲು ಸಾಧ‍್ಯ?'’ ಎಂದಿದ್ದಾರೆ.

ಅವರ ಹೇಳಿಕೆ ವಿವಾದವಾಗುತ್ತಿದ್ದಂತೇ ಮತ್ತೆ ಪ್ರತಿಕ್ರಿಯಿಸಿದ್ದು, ‘ಕೆಲವರು ರಾಮ ಮೆಂತೆ ಬಾತ್ ತಿನ್ನುತ್ತಿದ್ದ ಎನ್ನುತ್ತಾರೆ. ಆದರೆ ಆ ಕಾಲದಲ್ಲಿ ಅಕ್ಕಿಯೇ ಇರಲಿಲ್ಲ. ಪ್ರಭು ರಾಮ ಕ್ಷತ್ರಿಯ. ಕ್ಷತ್ರಿಯರಾದವರು ಮಾಂಸಾಹಾರಿಗಳು. ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ಇದರಲ್ಲಿ ವಿವಾದವಾಗುವಂತದ್ದು ಏನೂ ಇಲ್ಲ. ಶೇ.80 ರಷ್ಟು ಜನ ಮಾಂಸಾಹಾರಿಗಳು, ಅವರೆಲ್ಲರೂ ರಾಮನನ್ನು ಪೂಜಿಸುತ್ತಾರೆ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೇದಾರನಾಥಗೆ ಪ್ರಯಾಣಬೆಳೆಸುವವರು ಈ ಸುದ್ದಿಯನ್ನು ಮಿಸ್ ಮಾಡದೇ ಓದಲೇ ಬೇಕು

ಇಸ್ರೇಲ್‌- ಇರಾನ್ ಮಧ್ಯೆ ಹೆಚ್ಚಿದ ಉದ್ವಿಗ್ನತೆ: ಇರಾನ್‌ನಲ್ಲಿ ಭಾರತೀಯರ ಸುರಕ್ಷತೆಗೆ ಸಹಾಯವಾಣಿ ಬಿಡುಗಡೆ

ತಿರುವನಂತಪುರಂನಲ್ಲಿ ತುರ್ತು ಭೂಸ್ಪರ್ಶವಾದ ಬ್ರಿಟಿಷ್ ಫೈಟರ್ ಜೆಟ್‌

ದೇಶದಲ್ಲಿ ಇದೆಂಥಾ ದುರ್ಘಟನೆಗಳು: ಇಂದ್ರಾಯಣಿ ನದಿ ಸೇತುವೆ ಮುರಿದು ಹಲವು ಪ್ರವಾಸಿಗರು ನಾಪತ್ತೆ

Karnataka Weather: ಬೆಂಗಳೂರಿಗರಿಗೂ ಎಚ್ಚರ, ರಾಜ್ಯದ ಹವಾಮಾನ ಪರಿಸ್ಥಿತಿ ಹೇಗಿದೆ ನೋಡಿ

ಮುಂದಿನ ಸುದ್ದಿ
Show comments