Webdunia - Bharat's app for daily news and videos

Install App

ಶ್ರೀರಾಮ ಮಾಂಸಾಹಾರಿ: ಎನ್ ಸಿಪಿ ನಾಯಕ ಜಿತೇಂದ್ರ ವಿವಾದಾತ್ಮಕ ಹೇಳಿಕೆ

Webdunia
ಗುರುವಾರ, 4 ಜನವರಿ 2024 (11:00 IST)
ಬೆಂಗಳೂರು: ಅಯೋಧ‍್ಯೆ ರಾಮಮಂದಿರ ಲೋಕಾರ್ಪಣೆಗೆ ಕೆಲವೇ ದಿನಗಳು ಬಾಕಿಯಿರುವಾಗ ಮಹಾರಾಷ್ಟ್ರದ ಎನ್ ಸಿಪಿ ಪಕ್ಷದ ನಾಯಕ ಜಿತೇಂದ್ರ ಅಹ್ವಾದ್ ಪ್ರಭು ಶ್ರೀರಾಮಚಂದ್ರನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಶ್ರೀರಾಮಚಂದ್ರ ಮಾಂಸಾಹಾರಿ. ಇಲ್ಲದೇ ಹೋಗಿದ್ದರೆ 14 ವರ್ಷ ಆತ ಹೇಗೆ ಕಾಡಿನಲ್ಲಿ ಜೀವನ ಮಾಡುತ್ತಿದ್ದ ಎಂದು ಜಿತೇಂದ್ರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

‘ನಾವು ಇತಿಹಾಸವನ್ನು ಸರಿಯಾಗಿ ಓದುವುದೇ ಇಲ್ಲ ಮತ್ತು ರಾಜಕೀಯಕ್ಕಾಗಿ ಎಲ್ಲಾ ಮರೆತುಬಿಡುತ್ತೇವೆ. ರಾಮ ನಮ್ಮವನು. ನಮ್ಮಂತೆ ಬಹುಜನ. ಅವನು ಆಹಾರಕ್ಕಾಗಿ ಬೇಟೆಯಾಡುತ್ತಿದ್ದ. ರಾಮ ಯಾವತ್ತೂ ಸಸ್ಯಾಹಾರಿಯಾಗಿರಲಿಲ್ಲ. ಆತ ಮಾಂಸಾಹಾರಿ. ಇಲ್ಲದೇ ಹೋದರೆ ಸಸ್ಯಾಹಾರಿಯಾಗಿದ್ದುಕೊಂಡು ಒಬ್ಬ ವ್ಯಕ್ತಿ ಕಾಡಿನಲ್ಲಿ 14 ವರ್ಷ ಹೇಗೆ ಜೀವನ ಮಾಡಲು ಸಾಧ‍್ಯ?'’ ಎಂದಿದ್ದಾರೆ.

ಅವರ ಹೇಳಿಕೆ ವಿವಾದವಾಗುತ್ತಿದ್ದಂತೇ ಮತ್ತೆ ಪ್ರತಿಕ್ರಿಯಿಸಿದ್ದು, ‘ಕೆಲವರು ರಾಮ ಮೆಂತೆ ಬಾತ್ ತಿನ್ನುತ್ತಿದ್ದ ಎನ್ನುತ್ತಾರೆ. ಆದರೆ ಆ ಕಾಲದಲ್ಲಿ ಅಕ್ಕಿಯೇ ಇರಲಿಲ್ಲ. ಪ್ರಭು ರಾಮ ಕ್ಷತ್ರಿಯ. ಕ್ಷತ್ರಿಯರಾದವರು ಮಾಂಸಾಹಾರಿಗಳು. ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ಇದರಲ್ಲಿ ವಿವಾದವಾಗುವಂತದ್ದು ಏನೂ ಇಲ್ಲ. ಶೇ.80 ರಷ್ಟು ಜನ ಮಾಂಸಾಹಾರಿಗಳು, ಅವರೆಲ್ಲರೂ ರಾಮನನ್ನು ಪೂಜಿಸುತ್ತಾರೆ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments