Publish Date: Fri, 03 Jun 2022 (17:11 IST)
Updated Date: Fri, 03 Jun 2022 (20:21 IST)
ಮಕ್ಕಳು ಅಳು ನಿಲ್ಲಿಸುತ್ತಿಲ್ಲ ಎಂದು ಸಿಟ್ಟಿಗೆದ್ದ ತಾಯಿಯೊಬ್ಬಳು 4 ತಿಂಗಳ ಮಗಳು ಹಾಗೂ 2 ವರ್ಷದ ಮಗನನ್ನು ಕೊಂದು ಸುತ್ತು ಹಾಕಿದ ಅಮಾನವೀಯ ಘಟನೆ ಮಹಾರಾಷ್ಟ್ರದ ನಾಂದೇಡ್ ಹಳ್ಳಿಯೊಂದರಲ್ಲಿ ನಡೆದಿದೆ.
ಧುರ್ಪಾದಬಾಯಿ ಗಣಪತ್ ನಿಮಲ್ವಾಡ್ (30) ಆರೋಪಿ. ಆಕೆಯ ತಾಯಿ ಮತ್ತು ಸಹೋದರ ಮಕ್ಕಳ ಶವಗಳನ್ನು ಸುಡಲು ಸಹಾಯ ಮಾಡಿದ್ದು, ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಮೇ 31 ಮತ್ತು ಜೂನ್ 1 ರಂದು ಸತತ ಎರಡು ದಿನಗಳಲ್ಲಿ ಜಿಲ್ಲೆಯ ಭೋಕರ್ ತಾಲೂಕಿನ ಪಾಂಡುರ್ನಾ ಗ್ರಾಮದಲ್ಲಿ ಹತ್ಯೆಗಳು ನಡೆದಿವೆ ಎಂದು ಪೊಲೀಸ್ ಅಧಿಕಾರಿ.
ಮೇ. 31ರಂದು ಧುರ್ಪಾದಬಾಯಿಯ ನಾಲ್ಕು ತಿಂಗಳ ಮಗಳು ಅನುಸೂಯಾ ತುಂಬಾ ಅಳುತ್ತಿದ್ದಳು. ಇದರಿಂದ ಕೋಪಗೊಂಡ ಧುರ್ಪಾದಬಾಯಿ ಆಕೆಯ ಕತ್ತು ಹಿಸುಕಿ ಕೊಂದಿದ್ದಾಳೆ. ಮರುದಿನ ಮಗ ಅಳುತ್ತಿದ್ದುದನ್ನು ನೋಡಿ ಕೋಪಗೊಂಡು ಆತನ ಕತ್ತನ್ನು ಹಿಸುಕಿ ಕೊಂದಿದ್ದಾಳೆ.
ಮುಖೇಡ್ ತಾಲ್ಲೂಕಿನ ನಿವಾಸಿಗಳಾದ ಧುರ್ಪಾದಬಾಯಿ ತಾಯಿ ಕೊಂಡಬಾಯಿ ರಾಜೇಮೋದ್ ಮತ್ತು ಸಹೋದರ ಮಾಧವ್ ರಾಜೇಮೋದ್ ಸಹಾಯ ಮಾಡಿದ್ದಾರೆ. ಇವರ ಸಹಾಯದೊಂದಿಗೆ ಮಕ್ಕಳ ಶವವನ್ನು ಹೊಲದಲ್ಲಿ ಸುತ್ತುಹಾಕಿದ್ದಾಳೆ.
ಘಟನೆ ಸಂಬಂಧಿಸಿ ಗ್ರಾಮಸ್ಥರು ನೀಡಿದ ಮಾಹಿತಿಯು ಮೂವರ ವಿರುದ್ಧವೂ ಸ್ಥಳೀಯ ಆರೋಪಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಮೂವರನ್ನು ಬಂಧಿಸಿದ್ದಾರೆ.