ಬೆಂಗಳೂರು: ನಾವು ಬ್ರಾಹ್ಮಣರು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಎಂಬ ಪ್ರತ್ಯೇಕತೆಯನ್ನು ಬಿಟ್ಟು ತಾವು ಭಾರತ ಮಾತೆಯ ಪುತ್ರರು ಎಂದು ಬಂದರೆ ಅಂತವರಿಗೆ ಆರ್ಎಸ್ಎಸ್ ಶಾಖೆಗಳಿಗೆ ಸೇರಲು ಸ್ವಾಗತ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು
ಬೆಂಗಳೂರಿನಲ್ಲಿ '100 ವರ್ಷಗಳ ಸಂಘ ಪಯಣ: ಹೊಸ ದಿಗಂತಗಳು' ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಸ್ಲಿಮರಿಗೆ ಆರೆಸ್ಸೆಸ್ ಸೇರಲು ಅವಕಾಶ ಇದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದರು
ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಸೇರಿದಂತೆ ಎಲ್ಲ ಸಮುದಾಯಗಳ ಜನರು ತಮ್ಮನ್ನು ಭಾರತ ಮಾತೆಯ ಪುತ್ರರು ಮತ್ತು ವಿಶಾಲ ಹಿಂದೂ ಸಮಾಜದ ಸದಸ್ಯರೆಂದು ಹೇಳುವವರನ್ನು ಸಂಘವು ಸ್ವಾಗತಿಸುತ್ತದೆ ಎಂದರು.
ಆರ್ಎಸ್ಎಸ್ ಸಂಘಟನೆಯು ಸದಸ್ಯರನ್ನು ಜಾತಿ ಮತ್ತು ಧರ್ಮದ ಮೂಲಕ ವರ್ಗೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಸಂಘವು ಬ್ರಾಹ್ಮಣರು ಸೇರಿದಂತೆ ಯಾವುದೇ ಜಾತಿಗೆ ಪ್ರಾಮುಖ್ಯತೆಯನ್ನು ನೀಡುವುದಿಲ್ಲ.
ಸಂಘದಲ್ಲಿ ಯಾವುದೇ ಜಾತಿಗೆ ಅವಕಾಶವಿಲ್ಲ. ಯಾವುದೇ ಮುಸ್ಲಿಂ, ಕ್ರಿಶ್ಚಿಯನ್ನರಿಗೆ ಸಂಘಕ್ಕೆ ಅವಕಾಶವಿಲ್ಲ. ಹಿಂದೂಗಳಿಗೆ ಮಾತ್ರ ಅವಕಾಶವಿದೆ. ಆದ್ದರಿಂದ ವಿವಿಧ ಪಂಗಡದ ಜನರು, ಮುಸ್ಲಿಂ, ಕ್ರಿಶ್ಚಿಯನ್ನರು, ಯಾವುದೇ ಪಂಗಡದ ಜನರು ಸಂಘಕ್ಕೆ ಬರಬಹುದು ಆದರೆ ಪ್ರತ್ಯೇಕತೆಯನ್ನು ದೂರವಿಡಿ ಎಂದು ಸಂಘವು ವಿವರಿಸಿದೆ.