Select Your Language

Notifications

webdunia
webdunia
webdunia
webdunia

ಮೋದಿ ಬ್ರಹ್ಮಾಸ್ತ್ರ : ಬಿಜೆಪಿ ಮಠದ ರಾಜಕೀಯ ಶುರು

ಮೋದಿ ಬ್ರಹ್ಮಾಸ್ತ್ರ : ಬಿಜೆಪಿ ಮಠದ ರಾಜಕೀಯ ಶುರು
ನವದೆಹಲಿ , ಶುಕ್ರವಾರ, 13 ಜನವರಿ 2023 (12:58 IST)
ಬೆಂಗಳೂರು : ಪ್ರಧಾನಿ ಮೋದಿ ಬ್ರಹ್ಮಾಸ್ತ್ರದ ನಡುವೆಯೂ ಮಠಾಧೀಶರ ಅಸ್ತ್ರ ಸಿದ್ಧಪಡಿಸಲು ಬಿಜೆಪಿ ಪ್ಲಾನ್ ಮಾಡ್ತಿದೆ. ರಾಜ್ಯದ ನಾಲ್ಕು ದಿಕ್ಕುಗಳಲ್ಲೂ ಸಮುದಾಯಗಳನ್ನೇ ಟಾರ್ಗೆಟ್ ಮಾಡಿಕೊಂಡು ಆ ಕ್ಷೇತ್ರಗಳಲ್ಲಿ ಮಠಾಧೀಶರಿಗೆ ಬಿಜೆಪಿ ಟಿಕೆಟ್ ನೀಡುವ ಬಗ್ಗೆ ಪ್ರಸ್ತಾಪ ನಡೆದಿದೆ ಎನ್ನಲಾಗಿದೆ.

2023ರ ವಿಧಾನಸಭಾ ಚುನಾವಣಾ ರಣಕಣ ರಂಗೇರಿದೆ. ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ರಾಜ್ಯದ ಅಧಿಕಾರದ ಗದ್ದುಗೆ ಹಿಡಿಯಲು ಜಿದ್ದಾಜಿದ್ದಿಗೆ ಬಿದ್ದಿವೆ. ಈ ನಡುವೆ ಪ್ರತಿಪಕ್ಷಗಳ ಪ್ಲಾನ್ ಅನ್ನು ತಲೆಕೆಳಗೆ ಮಾಡಲು ಬಿಜೆಪಿ ದೊಡ್ಡ ಮಾಸ್ಟರ್ ಪ್ಲಾನ್ ಮಾಡಿದೆ. 

2023ರ ಚುನಾವಣೆಗೆ ಮಠದ ರಾಜಕೀಯ ಶುರು ಮಾಡಲು ಮುಂದಾಗಿದ್ದು, ಬಿಜೆಪಿ ವೇದಿಕೆಯಲ್ಲಿ ಮತ್ತೆ ಮಠಾಧೀಶರಿಗೆ ಟಿಕೆಟ್ ಕೊಡುವ ಪ್ರಸ್ತಾಪದ ಬಿಸಿ ಬಿಸಿ ಚರ್ಚೆ ಶುರು ಆಗಿದೆ. ಇದಕ್ಕೆ ಪೂರಕವೆನ್ನುವಂತೆ ನಿದರ್ಶನಗಳೂ ಇವೆ. ಅಮಿತ್ ಶಾ ಬಂದಾಗಲೂ ಮಠದ ಜಪ, ನಡ್ಡಾ ಬಂದಾಗಾಲೂ 6 ಮಠಗಳ ಯಾತ್ರೆ ಕೈಗೊಳ್ಳಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ರಜಾ ದಿನಗಳಲ್ಲಿ ಸಹೋದ್ಯೋಗಿಗೆ ತೊಂದರೆ ನೀಡಿದ್ರೆ ದಂಡ..!