Publish Date: Sat, 17 Oct 2020 (19:22 IST)
Updated Date: Sat, 17 Oct 2020 (19:24 IST)
ಸ್ಥಳೀಯ ಪತ್ರಿಕೆಗಳಲ್ಲಿ ಸರಕಾರಿ ಉದ್ಯೋಗದ ಬಗ್ಗೆ ನಕಲಿ ಜಾಹೀರಾತು ನೀಡಿದ ವ್ಯಕ್ತಿಯೊಬ್ಬ ಜನರಿಂದ ಹಣ ಪಡೆದು ವಂಚಿಸಿರುವುದು ಬಯಲಾಗಿದೆ.
ಗುಜರಾತ್ನಲ್ಲಿ ಸರಕಾರಿ ಉದ್ಯೋಗದ ಜಾಹೀರಾತು ಹೋಲುವಂತೆ ನಕಲಿ ಉದ್ಯೋಗ ಜಾಹೀರಾತು ನೀಡಿ ಜನರಿಂದ ಶುಲ್ಕವಾಗಿ ಹಣ ಪಡೆದುಕೊಳ್ಳುತ್ತಿದ್ದ ಆರೋಪಿ ಸಂದೀಪ್ ಪಾಂಡ್ಯ ಎಂಬಾತವನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಸೈಬರ್ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧನ ಮಾಡಿದ್ದು, ಸೆಕ್ಷನ್ 406 (ಕ್ರಿಮಿನಲ್ ನಂಬಿಕೆ ಉಲ್ಲಂಘನೆ), 419 ಮತ್ತು 420 (ಮೋಸ), ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಮೇಲೆ ಕೇಸ್ ದಾಖಲು ಮಾಡಿದ್ದಾರೆ.
ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾದ ನಕಲಿ ಜಾಹೀರಾತುಗಳಿಗೆ ಬಲಿಯಾಗದಂತೆ ರಾಜ್ಯ ಸರ್ಕಾರವು ಉದ್ಯೋಗ ಆಕಾಂಕ್ಷಿಗಳಿಗೆ ಎಚ್ಚರಿಕೆ ನೀಡಿದೆ.