Publish Date: Sun, 21 Aug 2022 (06:50 IST)
Updated Date: Sun, 21 Aug 2022 (07:28 IST)
ಚೆನ್ನೈ: ಪತ್ನಿ ತನ್ನಲ್ಲಿ ಮನೆಗೆ ಬೇಕಾದ ಸಾಮಾನು ತರಲು ಹೇಳಿದಳೆಂದು ಪತಿ ಆಕೆಯ ಜುಟ್ಟು ಹಿಡಿದೆಳೆದು ಬೀದಿಗೆ ತಂದು ಥಳಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಮದ್ಯವ್ಯಸನಿಯಾಗಿದ್ದ ಪತಿ ಮನೆಗೆ ಬಂದಾಗ ಪತ್ನಿ ತರಕಾರಿ ತರಲು ಹೇಳಿದ್ದಳು. ಇದರಿಂದ ಸಿಟ್ಟಿಗೆದ್ದ ಆತ ಮನೆಯಿಂದ ಹೊರಗೆ ಎಳೆದು ತಂದು ಹಿಗ್ಗಾ ಮುಗ್ಗಾ ಥಳಿಸಿದ್ದಾನೆ. ಈ ಘಟನೆ ಸ್ಥಳೀಯ ಸಿಸಿಟಿವಿಯಲ್ಲಿ ದಾಖಲಾಗಿತ್ತು.
ತನಗೆ ಕೆಲಸ ಮಾಡಿ ಸುಸ್ತಾಗಿತ್ತು. ಹೀಗಾಗಿ ರಾತ್ರಿ ಗಂಡ ಮನೆಗೆ ಬಂದಾಗ ತರಕಾರಿ ತರಲು ಹೇಳಿದ್ದೆ. ಆದರೆ ಕುಡಿದು ಬಂದಿದ್ದ ಆತ ತನ್ನ ಮೇಲೆ ಸಿಟ್ಟಿಗೆದ್ದ ಹಲ್ಲೆ ನಡೆಸಿದ್ದಾನೆ ಎಂದು ಪತ್ನಿ ದೂರಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.