Select Your Language

Notifications

webdunia
webdunia
webdunia
Tuesday, 8 April 2025
webdunia

ತಂದೆಯ ಕೊನೆಯಾಸೆಯಂತೆ ಸಾಲ ತೀರಿಸಲು ಜಾಹೀರಾತು ನೀಡಿದ ಮಗ! ಮುಂದೇನಾಯ್ತು?!

ಸಾಲ
ತಿರುವನಂತಪುರಂ , ಶನಿವಾರ, 5 ಫೆಬ್ರವರಿ 2022 (09:20 IST)
ತಿರುವನಂತಪುರಂ: ತಂದೆಯ ಕೊನೆಯ ಆಸೆ ನೆರವೇರಿಸಲು ಇಲ್ಲೊಬ್ಬ ಮಗ ಮುಂದಾಗಿದ್ದು, ಆ ಯೋಜನೆಯೀಗ ಆತನಿಗೇ ತಿರುವಾದ ಘಟನೆ ನಡೆದಿದೆ.

ನಾಝರ್ ಎಂಬ ವ್ಯಕ್ತಿ ತನ್ನ ತಂದೆ ಸಾಯುವ ಮುನ್ನ 40 ವರ್ಷಗಳ ಹಿಂದೆ ತನ್ನ ಸ್ನೇಹಿತ ಲೂಯಿಸ್ ಎಂಬವರಿಂದ ಪಡೆದ ಸಾಲ ತೀರಿಸಲು ತಿಳಿಸಿದ್ದರಂತೆ. ಅದರಂತೆ ನಾಝರ್ ತಂದೆಯ ಸ್ನೇಹಿತರ ಪತ್ತೆಗಾಗಿ ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದರು.

ಆದರೆ ಜಾಹೀರಾತು ನೋಡಿ ಐವರು ನಾನೇ ನಿಜವಾದ ಲೂಯಿಸ್ ಎಂದು ನಾಝರ್ ಗೆ ಕರೆ ಮಾಡಿದ್ದರಂತೆ. ಇದರಿಂದ ಫಜೀತಿಗೆ ಸಿಲುಕಿದ ನಾಝರ್ ಸ್ನೇಹಿತರ ಸಹಾಯ ಪಡೆದಿದ್ದು, ಇವರೆಲ್ಲಾ ನಕಲಿ ವ್ಯಕ್ತಿಗಳು ಎಂದು ಪತ್ತೆ ಮಾಡಿದ್ದಾರೆ. ಇದೀಗ ಹೇಗಾದರೂ ಸರಿಯೇ ನನ್ನ ತಂದೆಯ ನಿಜವಾದ ಸ್ನೇಹಿತನನ್ನು ಪತ್ತೆ ಮಾಡಿಯೇ ತೀರುತ್ತೇನೆ ಎಂದು ನಾಝರ್ ಪ್ರತಿಜ್ಞೆ ಮಾಡಿದ್ದಲ್ಲದೆ, ಹುಡುಕಾಟ ಮುಂದುವರಿಸಿದ್ದಾರಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೇಯರ್ ಎಲೆಕ್ಷನ್ ಮುಂದೂಡಿಕೆ