Select Your Language

Notifications

webdunia
webdunia
webdunia
webdunia

ವಧು ಬೇಕಾಗಿದೆ ಎಂದು ಪೊಲೀಸ್ ಠಾಣೆಯ ಕದ ತಟ್ಟಿದ!

ವಧು ಬೇಕಾಗಿದೆ ಎಂದು ಪೊಲೀಸ್ ಠಾಣೆಯ ಕದ ತಟ್ಟಿದ!
ಲಕ್ನೋ , ಭಾನುವಾರ, 14 ಮಾರ್ಚ್ 2021 (09:19 IST)
ಲಕ್ನೋ: ವಧು ಬೇಕಾಗಿದೆ ಎಂದು ಯುವಕನೊಬ್ಬ ನೇರವಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.


26 ವರ್ಷದ ಅಝೀಮ್ ಎಂಬಾತ ಕೇವಲ ತೀರಾ ಕುಳ್ಳಗಿನ ವ್ಯಕ್ತಿ. ಈತ 21 ವರ್ಷದವಾನಾಗಿದ್ದಾಗಲೇ ಹುಡುಗಿ ಹುಡುಕಲು ಶುರು ಮಾಡಿದ್ದನಂತೆ. ಆದರೆ ಇದುವರೆಗೆ ಮದುವೆಗೆ ಹೆಣ‍್ಣು ಸಿಕ್ಕಿರಲಿಲ್ಲ. ಹೀಗಾಗಿ ಈತ ನೇರವಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ.

ನಾನು ಕುಳ್ಳಗಿದ್ದೇನೆ ಎಂಬ ಕಾರಣಕ್ಕೆ ನನಗೆ ಹುಡುಗಿ ಸಿಗುತ್ತಿಲ್ಲ. ನನಗೂ ಮದುವೆಯಾಗುವ ಹಕ್ಕಿಲ್ಲವೇ? ನನಗೆ ರಾತ್ರಿ ನಿದ್ರೆಯೇ ಬರುತ್ತಿಲ್ಲ ಎಂದು ಆತ ಅಳಲು ತೋಡಿಕೊಂಡಿದ್ದಾನೆ.  ಅಷ್ಟೇ ಅಲ್ಲ, ಈತ ಈ ಹಿಂದೆ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿದ್ದ ಅಖಿಲೇಶ್ ಯಾದವ್, ಹಾಲಿ ಸಿಎಂ ಯೋಗಿ ಆದಿತ್ಯನಾಥ್ ಗೂ ಈ ವಿಚಾರವಾಗಿ ಪತ್ರ ಬರೆದಿದ್ದನಂತೆ. ಇದೀಗ ಈತನ ದೂರು ಪಡೆದ ಪೊಲೀಸರು ಏನು ಮಾಡುವುದೆಂದು ತೋಚದೇ ಕುಳಿತಿದ್ದಾರೆ!

Share this Story:

Follow Webdunia kannada

ಮುಂದಿನ ಸುದ್ದಿ

ಚಿಕಿತ್ಸೆಗೆ ಹಣವಿಲ್ಲದೇ ಮಗುವಿನ ಜೀವ ತೆಗೆದ ಕುಟುಂಬಸ್ಥರು